ಕರ್ನಾಟಕ

karnataka

By

Published : Mar 26, 2021, 9:39 AM IST

ETV Bharat / state

ರಾಣೆಬೆನ್ನೂರು: ಸಾಲಬಾಧೆ ತಾಳಲಾರದೆ ಸಾರಿಗೆ ನೌಕರ ಆತ್ಮಹತ್ಯೆ

ಕಳೆದ ಆರು ತಿಂಗಳಿಂದ ಸರಿಯಾಗಿ ವೇತನ ಸಿಗದ ಹಿನ್ನೆಲೆ ಸಾಲ ಮಾಡಿಕೊಂಡಿದ್ದ ಸಾರಿಗೆ ನೌಕರ ನಿನ್ನೆ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಾಲಬಾಧೆ ತಾಳಲಾರದೆ ಸಾರಿಗೆ ನೌಕರ ಆತ್ಮಹತ್ಯೆ
ಸಾಲಬಾಧೆ ತಾಳಲಾರದೆ ಸಾರಿಗೆ ನೌಕರ ಆತ್ಮಹತ್ಯೆ

ರಾಣೆಬೆನ್ನೂರು (ಹಾವೇರಿ): ಸಾಲಬಾಧೆ ತಾಳಲಾರದೆ ಸಾರಿಗೆ ನೌಕರನೋರ್ವ ನೇಣಿಗೆ ಶರಣಾದ ಘಟನೆ ರಾಣೆಬೆನ್ನೂರು ತಾಲೂಕಿನ ಮಣಕೂರ ಗ್ರಾಮದಲ್ಲಿ ನಡೆದಿದೆ.

ಸಾಲಬಾಧೆ ತಾಳಲಾರದೆ ಸಾರಿಗೆ ನೌಕರ ಆತ್ಮಹತ್ಯೆ

ಗೋಪಾಲರಡ್ಡಿ ಸೋಮರೆಡ್ಡಿ ಜಕ್ಕರೆಡ್ಡಿ(47) ಆತ್ಮಹತ್ಯೆ ಮಾಡಿಕೊಂಡ ನೌಕರ. ಗೋಪಾಲರೆಡ್ಡಿ ಅವರು ರಾಣೆಬೆನ್ನೂರು ನಗರದ ಬಸ್ ಡಿಪೋದಲ್ಲಿ ಚಾಲಕನಿಗೆ ಕರ್ತವ್ಯ ನಿರ್ವಹಿಸುತ್ತಿದ್ದರು.

ಇದನ್ನೂ ಓದಿ:ಪೊಲೀಸರ​ ಮೇಲೆ ಹಲ್ಲೆ: ಬೆಳ್ಳಂಬೆಳಗ್ಗೆ ರೌಡಿಶೀಟರ್‌ ಕಾಲಿಗೆ ಗುಂಡೇಟು

ಅಲ್ಲದೆ ಕಳೆದ ಆರು ತಿಂಗಳಿಂದ ಅವರಿಗೆ ಸರಿಯಾಗಿ ವೇತನ ಸಿಗುತ್ತಿರಲಿಲ್ಲ. ಇದರಿಂದ ಜೀವನ ನಿರ್ವಹಣೆಗಾಗಿ ಸಾಲ ಮಾಡಿಕೊಂಡಿದ್ದರು. ಇದರಿಂದ ನೌಕರ ಖಿನ್ನತೆಗೆ ಒಳಗಾಗಿದ್ದರು. ನಿನ್ನೆ ರಾತ್ರಿ ಸಮಯದಲ್ಲಿ ಊರ ಹೊರಗೆ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಕುರಿತು ಹಲಗೇರಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details