ಕರ್ನಾಟಕ

karnataka

ETV Bharat / state

Impact: ಈಟಿವಿ ಭಾರತ ವರದಿಗೆ ಎಚ್ಚೆತ್ತ ಅಧಿಕಾರಿಗಳು: ಹೆರಿಗೆ ಆಸ್ಪತ್ರೆಗೆ ತುರ್ತುಚಿಕಿತ್ಸೆ! - ಸುಣ್ಣ-ಬಣ್ಣ ಕಂಡ ಹೆರಿಗೆ ಆಸ್ಪತ್ರೆ..

ಕಳೆದ ಮೂರು ದಿನಗಳ ಹಿಂದೆ 'ಈಟಿವಿ ಭಾರತ' ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕುರಿತು "ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಅರ್ಜೆಂಟಾಗಿ ಬೇಕಿದೆ ಸರ್ಜರಿ" ಎಂಬ ವರದಿ ಪ್ರಸಾರ ಮಾಡಿತ್ತು. ಈ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆಸ್ಪತ್ರೆಗೆ ಸುಣ್ಣ ಬಣ್ಣ ಹಚ್ಚಿ ಮೂಲಭೂತ ಸೌಕರ್ಯ ಒದಗಿಸಿದ್ದಾರೆ.

Infrastructure for Maternity Hospital- Etv Bharat Impact
ಸುಣ್ಣ-ಬಣ್ಣ ಕಂಡ ಹೆರಿಗೆ ಆಸ್ಪತ್ರೆ..

By

Published : Feb 6, 2020, 5:47 PM IST

ರಾಣೆಬೆನ್ನೂರು:ತಾಲೂಕಿನ ಚಳಗೇರಿ ಗ್ರಾಮದ ಹೆರಿಗೆ ಆಸ್ಪತ್ರೆಗೆ ಸುಣ್ಣ ಬಣ್ಣ ಹಚ್ಚುವ ಮೂಲಕ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ.

ಕಳೆದ ಮೂರು ದಿನಗಳ ಹಿಂದೆ 'ಈಟಿವಿ ಭಾರತ' ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕುರಿತು "ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಅರ್ಜೆಂಟಾಗಿ ಬೇಕಿದೆ ಸರ್ಜರಿ" ಎಂಬ ವರದಿ ಪ್ರಸಾರ ಮಾಡಿತ್ತು. ಈ ವರದಿಗೆ ಸ್ಪಂದಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆಸ್ಪತ್ರೆಗೆ ಸುಣ್ಣ ಬಣ್ಣ ಹಚ್ಚಿ ಮೂಲಭೂತ ಸೌಕರ್ಯ ಒದಗಿಸಿದ್ದಾರೆ.

ಸುಣ್ಣ-ಬಣ್ಣ ಕಂಡ ಹೆರಿಗೆ ಆಸ್ಪತ್ರೆ..

ಇದನ್ನೂ ಓದಿ: ರಾಣೆಬೆನ್ನೂರು ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಅರ್ಜೆಂಟಾಗಿ ಆಗ್ಬೇಕಿದೆ ಸರ್ಜರಿ!

ಆಸ್ಪತ್ರೆಗೆ ಆರೋಗ್ಯ ಇಲಾಖೆಯಿಂದ ಒಬ್ಬ ವೈದ್ಯ ಮತ್ತು ಇಬ್ಬರು ನರ್ಸ್​ಗಳನ್ನು ನಿಯೋಜಿಸಲಾಗಿದೆ. ಕಳೆದ ಒಂದು ವರ್ಷದಿಂದ ಈ ಆಸ್ಪತ್ರೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿತ್ತು. ಹೀಗಾಗಿ ಇಲ್ಲಿಗೆ ಗರ್ಭಿಣಿಯರು ಹೆರಿಗಾಗಿ ಬರುತ್ತಿರಲಿಲ್ಲ. ಸದ್ಯ ಆಸ್ಪತ್ರೆಯ ಸ್ಥಿತಿಗತಿ ಬದಲಾಗಿದೆ.

ABOUT THE AUTHOR

...view details