ಕರ್ನಾಟಕ

karnataka

ETV Bharat / state

ನೂತನ ಸಂತೆ ಕಟ್ಟೆ ಉದ್ಘಾಟಿಸಿದ ಆರ್.ಶಂಕರ್​ - We are in the lead to touch the government plan to the public

ರಾಣೆಬೆನ್ನೂರು ತಾಲೂಕಿನ ಆರೇಮಲ್ಲಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸಂತೆ ಕಟ್ಟೆಯನ್ನು ಇಂದು ತೋಟಗಾರಿಕೆ ಮತ್ತು ರೇಷ್ಮೆ ಖಾತೆ ಸಚಿವ ಆರ್.ಶಂಕರ್​ ಉದ್ಘಾಟನೆ ಮಾಡಿದರು.

ಸಂತೆ ಕಟ್ಟೆ ಉದ್ಘಾಟಿಸಿದ ಆರ್.ಶಂಕರ್​
ಸಂತೆ ಕಟ್ಟೆ ಉದ್ಘಾಟಿಸಿದ ಆರ್.ಶಂಕರ್​

By

Published : Feb 15, 2021, 6:16 PM IST

ರಾಣೆಬೆನ್ನೂರು: ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕಾಯಕ ನಮ್ಮದಾಗಿದೆ ಎಂದು ತೋಟಗಾರಿಕೆ ಮತ್ತು ರೇಷ್ಮೆ ಖಾತೆ ಸಚಿವ ಆರ್.ಶಂಕರ್​ ಹೇಳಿದರು.

ಸಂತೆ ಕಟ್ಟೆ ಉದ್ಘಾಟಿಸಿದ ಆರ್.ಶಂಕರ್​

ರಾಣೆಬೆನ್ನೂರು ತಾಲೂಕಿನ ಆರೇಮಲ್ಲಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸಂತೆ ಕಟ್ಟೆ ಉದ್ಘಾಟನೆ ಮಾಡಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ರೈತರಿಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಮುಂಬರುವ ಬಜೆಟ್​ನಲ್ಲಿ ಸಿಎಂ ಯಡಿಯೂರಪ್ಪ ರೈತರಿಗಾಗಿ ಉತ್ತಮ ಬಜೆಟ್ ಮಂಡನೆ ಮಾಡಲು ಚಿಂತನೆ ಮಾಡಿದ್ದಾರೆ ತಿಳಿಸಿದರು.

ಆರೇಮಲ್ಲಾಪುರ ಗ್ರಾಮದಲ್ಲಿ ಸುಮಾರು 33 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಸಂತೆ ಕಟ್ಟೆಯನ್ನು ರೈತರು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಅಲ್ಲದೇ ರೈತರು ಬೆಳೆದಂತಹ ಬೆಳೆಗಳನ್ನು ಇಲ್ಲಿ ತಂದು ಮಾರುವ ಮೂಲಕ ಉತ್ತಮ ಲಾಭವನ್ನು ಪಡೆಯಬೇಕು ಎಂದು ರೈತರಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶಾಸಕ ಅರುಣಕುಮಾರ ಪೂಜಾರ, ಜಿ.ಪಂ ಅಧ್ಯಕ್ಷ ಏಕನಾಥ ಭಾನುವಳ್ಳಿ, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ ಕೋಳಿವಾಡ ಭಾಗಿಯಾಗಿದ್ದರು.

ABOUT THE AUTHOR

...view details