ಕರ್ನಾಟಕ

karnataka

ಪ್ರತಿ ಲೀಟರ್​ ಹಾಲಿಗೆ 3 ರೂ. ಹೆಚ್ಚಳ, ಹಾಲು ಒಕ್ಕೂಟದ 10 ತಿಂಗಳ ಲಾಭ ರೈತರಿಗೆ ವಿತರಣೆ: ಬಸವರಾಜ್ ಅರಬಗೊಂಡ

ರೈತರಿಗೆ ಸಿಹಿ ಸುದ್ದಿ - ಹಾಲು ಒಕ್ಕೂಟದ ಕಳೆದ 10 ತಿಂಗಳ ಲಾಭವನ್ನು ರೈತರಿಗೆ ನೀಡಲಾಗುತ್ತದೆ - ಹಾವೇರಿ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ್ ಅರಬಗೊಂಡ ಹೇಳಿಕೆ.

By

Published : Jan 31, 2023, 7:50 PM IST

Published : Jan 31, 2023, 7:50 PM IST

Updated : Jan 31, 2023, 8:31 PM IST

Basavaraj Arabagonda President
ಹಾಲು ಒಕ್ಕೂಟದ ಕಳೆದ 10 ತಿಂಗಳ ಲಾಭವನ್ನು ರೈತರಿಗೆ ನೀಡುತ್ತದೆ:ಬಸವರಾಜ್ ಅರಬಗೊಂಡ

ಹಾವೇರಿ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ್ ಅರಬಗೊಂಡ

ಹಾವೇರಿ:ಹಾಲುಒಕ್ಕೂಟದ ಕಳೆದ 10 ತಿಂಗಳ ಲಾಭವನ್ನು ರೈತರಿಗೆ ನೀಡುವುದಾಗಿ ಹಾವೇರಿ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ್ ಅರಬಗೊಂಡ ಹೇಳಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರ ಪ್ರತಿ ಲೀಟರ್ ಹಾಲಿಗೆ ಮೂರು ರೂಪಾಯಿ ಹೆಚ್ಚಳ ಮಾಡಿರುವುದಾಗಿ ತಿಳಿಸಿದರು. ಈ ವೇಳೆ ಪೂರ್ಣ ಪ್ರಮಾಣದ ಲಾಭವನ್ನು ರೈತರಿಗೆ ವಿತರಣೆ ಮಾಡಲು ಒಕ್ಕೂಟ ನಿರ್ಧರಿಸಿದೆ ಎಂದು ಬಸವರಾಜ್ ಮಾಹಿತಿ ನೀಡಿದರು.

ಹಾವೇರಿ ಹಾಲು ಒಕ್ಕೂಟ 25-02-2022 ರಂದು ಕೆಎಂಎಫ್‌ನಿಂದ ವಿಭಜನೆಯಾಗಿದ್ದು, 01-04-22 ರಿಂದ ತನ್ನ ಎಲ್ಲ ಕಾರ್ಯ ಚಟುವಟಿಕೆಗಳನ್ನ ಪ್ರತ್ಯೇಕವಾಗಿ ನಿರ್ವಹಿಸುತ್ತಿದೆ ಎಂದರು. ಇಲ್ಲಿ ಒಕ್ಕೂಟ ಕಾರ್ಯಾರಂಭಿಸಿ 10 ತಿಂಗಳಾಗಿವೆ. ಈ ಹಿಂದೆ ಧಾರವಾಡ ಹಾಲು ಒಕ್ಕೂಟದಲ್ಲಿರುವಾಗಿ ಇದ್ದ ಎಲ್ಲಾ ಕಾರ್ಯಕ್ರಮ ಮತ್ತು ಚಟುವಟಿಕೆಗಳನ್ನ ಸಂಪೂರ್ಣವಾಗಿ ಅಳವಡಿಸಿಕೊಂಡಿದೆ ಎಂದು ಬಸವರಾಜ್ ಅವರು ತಿಳಿಸಿದರು.

ರಾಜ್ಯದ ಹಾಲು ಒಕ್ಕೂಟಗಳಲ್ಲಿ ಹಾವೇರಿ ಹಾಲು ಒಕ್ಕೂಟ 15 ನೇ ಘಟಕ:ರೈತರಿಗೆ ಮತ್ತು ಗ್ರಾಹಕರಿಗೆ ನಂದಿನಿ ಬಳಗದವರಿಗೆ ನೂತನ ಹಾಲು ಒಕ್ಕೂಟ ಎಲ್ಲ ಸೇವೆಗಳನ್ನು ಮುಟ್ಟಿಸುವ ಮೂಲಕ ಕಡಿಮೆ ಸಮಯದಲ್ಲಿ ನಿರ್ದಿಷ್ಟ ಗುರಿ ತಲುಪಿದೆ. ರಾಜ್ಯದ ಹಾಲು ಒಕ್ಕೂಟಗಳಲ್ಲಿ ಹಾವೇರಿ ಹಾಲು ಒಕ್ಕೂಟ 15 ನೇ ಘಟಕವಾಗಿದೆ. ಘಟಕ ರಚನೆಯಾಗಿ ರೈತರಿಗೆ ನೂತನ ಒಕ್ಕೂಟದ ಉಡುಗೊರೆಯಾಗಿ ರೈತರಿಗೆ ತಲುಪುವ ಮೂಲಕ ಕಡಿಮೆ ಅವಧಿಯಲ್ಲಿ ಅವುಗಳೆನ್ನೆಲ್ಲಾ ಹಾವೇರಿ ಹಾಲು ಒಕ್ಕೂಟ ನಿಭಾಯಿಸುತ್ತಿದೆ ಎಂದರು.

ರೈತರಿಗೆ ಪ್ರತಿ ಲೀಟರ್‌ ಹಾಲಿಗೆ ಒಟ್ಟು 36.ರೂ ನೀಡಲಾಗುತ್ತಿದೆ:ಜಿಲ್ಲೆಯಲ್ಲಿ ಶೇಖರಣೆಯಾಗುವ ಪ್ರತಿ ಲೀಟರ್‌ ಹಾಲಿಗೆ ಸರಾಸರಿ 28 ರೂಪಾಯಿ 83 ಪೈಸೆ ನೀಡಲಾಗುತ್ತಿತ್ತು. ಅದಕ್ಕೆ ಒಕ್ಕೂಟದಿಂದ 3 ರೂಪಾಯಿ ಮತ್ತು ಸರ್ಕಾರದಿಂದ ಪ್ರೋತ್ಸಾಹಧನ 5 ರೂಪಾಯಿ ಸೇರಿಸಿ ರೈತರಿಗೆ ಪ್ರತಿಲೀಟರ್‌ ಹಾಲಿಗೆ ಒಟ್ಟು 36.ರೂ ನೀಡಲಾಗುತ್ತಿದೆ. ಸಹಕಾರ ಸಂಘಗಳ ಮೂಲಕ ನೇರವಾಗಿ ಈ ಹಣ ರೈತರಿಗೆ ತಲುಪಲಿದೆ. ರೈತರಿಗಾಗಿ ಕಲ್ಯಾಣ ಸಂಘ ರಚನೆ ಮಾಡುತ್ತಿದ್ದು, ಅವುಗಳಿಂದ ಜಾನುವಾರು ಮೇಳ ಮಾಡಿ ಅತಿಹೆಚ್ಚು ಹಾಲು ಉತ್ಪಾದನೆ ಮಾಡುವ ರೈತರಿಗೆ ಹೈನುಗಾರ ಪಂಡಿತ್ ಪ್ರಶಸ್ತಿ ನೀಡಿ ಗೌರವಿಸಲಾಗುವದು ಎಂದು ವಿವರಿಸಿದರು.

ರೈತರ ಹಾಲು ಉತ್ಫಾದನೆಗೆ ಇರುವ ಸಮಸ್ಯೆಗಳನ್ನ ಬಗೆಹರಿಸಲಾಗುವುದು. ಹಾಲು ಉತ್ಫಾದಕರ ಸಂಜೀವಿನಿ ಎಂಬ ಹೊಸ ಯೋಜನೆ ಆರಂಭಿಸುವುದಾಗಿ ತಿಳಿಸಿದರು. ಪಶುಗಳ ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಸೌಲಭ್ಯಗಳನ್ನು ಮತ್ತು ರೋಗಗಳಿಗೆ ಲಸಿಕೆಗಳನ್ನು ರೈತರ ಮನೆ ಬಾಗಿಲಗೆ ಮುಟ್ಟಿಸಲಾಗುತ್ತದೆ. ಹಾಲು ಒಕ್ಕೂಟ ಕ್ಷೀರಸಿರಿ ತಂತ್ರಾಂಶ ಪ್ರತ್ಯೇಕಿಸಿಕೊಂಡು ಹಾವೇರಿ ಹಾಲು ಒಕ್ಕೂಟ ಕಾರ್ಯ ನಿರ್ವಹಿಸುತ್ತದೆ. ಹಾವೇರಿ ಜಿಲ್ಲೆಯ ಹಾಲಿನ ಬಟವಾಡೆಯನ್ನ ಹಾವೇರಿ ಜಿಲ್ಲಾ ಸಹಕಾರ ಹಾಲು ಒಕ್ಕೂಟದಿಂದ ಪಾವತಿಸಲು ಕ್ರಮ ಕೈಗೊಂಡಿದೆ. ಆದಷ್ಟು ಬೇಗ ಸಿದ್ಧವಸ್ತುಗಳ ವಿಭಾಗವನ್ನ ಪ್ರಾರಂಭಿಸುವದಾಗಿ ಬಸವರಾಜ್ ಮಾಹಿತಿ ನೀಡಿದರು.

ಮೆಗಾ ಡೈರಿ ಸ್ಥಾಪನೆಗೆ ಜಿಲ್ಲಾಡಳಿತದಿಂದ 30 ಎಕರೆ ಜಮೀನು ನೀಡಿದೆ:ಶೀಘ್ರದಲ್ಲಿ ದಿನಂಪ್ರತಿ ಲಕ್ಷ ಲೀಟರ್ ಉತ್ಪಾದನಾ ಸಾಮರ್ಥ್ಯದ ಯುಹೆಚ್‌ಟಿ ಪ್ಯಾಕಿಂಗ್ ಘಟಕ ಲೋಕಾರ್ಪಣಿಗೊಳ್ಳಲಿದೆ. ಮೆಗಾ ಡೈರಿ ಸ್ಥಾಪನೆಗೆ ಜಿಲ್ಲಾಡಳಿತ ಹಾವೇರಿ ಹಾಲು ಒಕ್ಕೂಟಕ್ಕೆ 30 ಎಕರೆ ಜಮೀನು ನೀಡಿದೆ ಎಂದು ಬಸವರಾಜ್ ಅರಬಗೊಂಡ ಮಾಹಿತಿ ನೀಡಿದರು.

ಇದನ್ನೂ ಓದಿ:ಹಾವೇರಿಯಲ್ಲಿ ಕಲಿಕಾ ಹಬ್ಬ ಆಚರಣೆ.. ಮನೆ ಮನೆಯಲ್ಲೂ ಎತ್ತುಗಳಿಗೆ ಸಿಂಗಾರ

Last Updated : Jan 31, 2023, 8:31 PM IST

ABOUT THE AUTHOR

...view details