ಕರ್ನಾಟಕ

karnataka

ಶಾಸಕ ಸತ್ಯನಾರಾಯಣರಿಗೆ ಮೌನಾಚರಣೆ ಸಲ್ಲಿಸಿ ಹಾವೇರಿ ಬಿಜೆಪಿ ಯಡವಟ್ಟು

By

Published : Aug 4, 2020, 10:56 PM IST

ಶಿರಾ ಶಾಸಕ ಸತ್ಯನಾರಾಯಣ ಅವರು ಅಗಲಿದ್ದಾರೆಂದು ರಾಜ್ಯದ ಅನೇಕ ನಾಯಕರು ಶ್ರದ್ಧಾಂಜಲಿ ಸಲ್ಲಿಸಿ ಯಡವಟ್ಟು ಮಾಡಿಕೊಂಡಿದ್ದಾರೆ.

Haveri bjp unknowingly prays tribute silence to sira MLA Satyanarayana
ಶಾಸಕ ಸತ್ಯನಾರಾಯಣರಿಗೆ ಮೌನಾಚರಣೆ ಸಲ್ಲಿಸಿ ಹಾವೇರಿ ಬಿಜೆಪಿ ಯಡವಟ್ಟು

ಹಾವೇರಿ:ಶಿರಾ ಶಾಸಕ ಮಾಜಿ ಸಚಿವ ಸತ್ಯನಾರಾಯಣ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈ ನಡುವೆ ಹಾವೇರಿ ಜಿಲ್ಲಾ ಬಿಜೆಪಿ ಮೌನಾಚರಣೆ ಸಲ್ಲಿಸುವ ಮೂಲಕ ಯಡವಟ್ಟು ಮಾಡಿಕೊಂಡಿದೆ.

ಶಾಸಕ ಸತ್ಯನಾರಾಯಣರಿಗೆ ಮೌನಾಚರಣೆ ಸಲ್ಲಿಸಿ ಹಾವೇರಿ ಬಿಜೆಪಿ ಯಡವಟ್ಟು

ಹಾವೇರಿ ಪ್ರವಾಸಿಮಂದಿರದಲ್ಲಿ ಮಂಗಳವಾರ ಹಾವೇರಿ ಶಾಸಕ ನೆಹರು ಓಲೇಕಾರ್ ಎರಡು ವರ್ಷದ ಸಾಧನೆ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಹಾವೇರಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಇದೀಗ ಬಂದ ಸುದ್ದಿ ಶಿರಾ ಶಾಸಕ ನಮ್ಮನ್ನು ಅಗಲಿದ್ದಾರೆ, ಅವರ ಆತ್ಮಕ್ಕೆ ಶಾಂತಿಕೋರಿ ಮೌನಾಚಾರಣೆ ಮಾಡುವ ಮೂಲಕ ನಮಿಸಲು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಹಾವೇರಿ ಶಾಸಕ ನೆಹರು ಓಲೇಕಾರ್ ಸೇರಿದಂತೆ ಹಲವು ಮುಖಂಡರು ಮೌನಾಚರಣೆ ಸಲ್ಲಿಸಿ ಯಡವಟ್ಟು ಮಾಡಿಕೊಂಡಿದ್ದಾರೆ.

ABOUT THE AUTHOR

...view details