ಕರ್ನಾಟಕ

karnataka

By

Published : Nov 16, 2019, 9:23 PM IST

Updated : Nov 16, 2019, 9:41 PM IST

ETV Bharat / state

ಪಿಎಸ್​​ಐ ವಿರುದ್ಧ ಹಲ್ಲೆ ಆರೋಪ... ಗೃಹ ಸಚಿವರಿಗೆ ಯುವಕನಿಂದ ದೂರು

ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಹಂಸಭಾವಿ ಪೊಲೀಸ್ ಠಾಣೆ ಪಿಎಸ್​ಐ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಯುವಕನೋರ್ವ ಆರೋಪ ಮಾಡಿದ್ದಾರೆ.

ಪಿಎಸ್​​ಐ ವಿರುದ್ಧ ಯುವಕನ ಮೇಲೆ ಹಲ್ಲೆ ಆರೋಪ

ಹಾವೇರಿ:ಜಿಲ್ಲೆಯ ಹಿರೇಕೆರೂರು ತಾಲೂಕು ಹಂಸಭಾವಿ ಪೊಲೀಸ್ ಠಾಣೆಯ ಪಿಎಸ್ಐ ಮೇಲೆ ಯುವಕನಿಗೆ ಥಳಿಸಿದ ಆರೋಪ ಕೇಳಿ ಬಂದಿದೆ.

ಕಳೆದ ರಾತ್ರಿ ಬೈಕ್​​ನಲ್ಲಿ ಹೋಗುತ್ತಿದ್ದ ವೇಳೆ ಪಿಎಸ್ಐ ಡಿಪ್-ಡಿಮ್ ನೀಡಲಿಲ್ಲ. ಹೀಗಾಗಿ ಬೈಕ್​ನಲ್ಲಿದ್ದ ಯುವಕ ಗುಂಡಿಗೆ ಬಿದ್ದಿದ್ದಾನೆ. ಇದನ್ನ ಪ್ರಶ್ನಿಸಿದ್ದಕ್ಕೆ ಪಿಎಸ್ಐ ಜಯಪ್ಪ, ಯುವಕ ಹರೀಶ್​ಗೆ ಮನಬಂದಂತೆ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪಿಎಸ್​​ಐ ವಿರುದ್ಧ ಯುವಕನ ಮೇಲೆ ಹಲ್ಲೆ ಆರೋಪ

ನಾನು ಹಂಸಭಾವಿ ಪಿಎಸ್ಐ, ನನಗೆ ಡಿಪ್-ಡಿಮ್ ಹೇಳ್ತಿಯಾ ಎಂದು ಹಲ್ಲೆ ಮಾಡಿದ್ದಾರೆ ಎಂದು ಹರೀಶ್​​ ಆರೋಪಿಸಿದ್ದಾರೆ. ಅಲ್ಲದೇ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಬೇರೆ ಕಡೆ ವರ್ಗಾಯಿಸುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

Last Updated : Nov 16, 2019, 9:41 PM IST

ABOUT THE AUTHOR

...view details