ರಾಣೆಬೆನ್ನೂರು :ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನ ಜನತೆ ತತ್ತರಿಸಿದ್ದಾರೆ.
ಮೂರು ದಿನದಿಂದ ಧಾರಾಕಾರ ಮಳೆ: ನಲುಗಿದ ರಾಣೆಬೆನ್ನೂರು ಜನ - ಜನತೆ ತತ್ತರ
ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಕೆಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ.
![ಮೂರು ದಿನದಿಂದ ಧಾರಾಕಾರ ಮಳೆ: ನಲುಗಿದ ರಾಣೆಬೆನ್ನೂರು ಜನ](https://etvbharatimages.akamaized.net/etvbharat/prod-images/768-512-4667328-thumbnail-3x2-chikk.jpg)
ಸುರಿಯುತ್ತಿರುವ ಮಳೆಗೆ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು, ನೀರಿನ ರಭಸಕ್ಕೆ ರಸ್ತೆಗಳೆಲ್ಲ ಹದಗೆಟ್ಟಿವೆ. ನಗರದ ಉಮಾಶಂಕರ, ಬನಶಂಕರಿ ನಗರ, ಗೌರಿಶಂಕರ ನಗರ, ಚೌಡೇಶ್ವರಿ ಬಡಾವಣೆ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಹಳ್ಳ ಹರಿಯುವ ಕಾರಣ ಈ ಪ್ರದೇಶದ ನೀರಿನ ಒತ್ತಡ ಹೆಚ್ಚಾಗಿದ್ದು, ಮನೆಯೊಳಗೆ ನೀರು ನುಗ್ಗುತ್ತಿದೆ.
ರಾಜಕಾಲುವೆ ಒತ್ತುವರಿ ಆರೋಪ:
ರಾಣೆಬೆನ್ನೂರ ನಗರ ಬೆಳೆದಂತೆ ರಾಜಕಾಲುವೆಗಳು ಮಾಯವಾಗುತ್ತಿವೆ. ನಗರಸಭೆ ನಿರ್ಮಾಣ ಮಾಡಿರುವ ರಾಜಕಾಲವೆಯನ್ನು ಕೆಲವರು ಒತ್ತುವರಿ ಮಾಡಿಕೊಂಡು ಅದರ ಮೇಲೆ ಕಟ್ಟಡ ಕಟ್ಟಿದ್ದಾರೆ ಎನ್ನಲಾಗುತ್ತಿದ್ದು, ಮಳೆಗಾಲದಲ್ಲಿ ಮಳೆ ನೀರು ಕಾಲುವೆ ಬಿಟ್ಟು ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಈ ಸಮಸ್ಯೆಗೆ ಸಂಬಂಧ ಪಟ್ಟ ಅಧಿಕಾರಿಗಳು ಪರಿಹಾರ ಕೊಡಬೇಕೆಂಬುದು ಜನರ ಆಗ್ರಹವಾಗಿದೆ.