ಹಾವೇರಿ:ಬಟ್ಟೆ ತೊಳೆಯಲು ಹೋಗಿದ್ದ ಯುವತಿ ನದಿಪಾಲಾದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮಲಕನಹಳ್ಳಿ ಗ್ರಾಮದ ಬಳಿ ನಡೆದಿದೆ.
ಬಟ್ಟೆ ತೊಳೆಯಲು ಹೋದ ಯುವತಿ ನದಿ ಪಾಲು - Kumadvati river
ಬಟ್ಟ ತೊಳೆಯಲು ಹೋಗಿ ಯುವತಿ ನದಿಪಾಲಾದ ಘಟನೆ ರಾಣೆಬೆನ್ನೂರು ತಾಲೂಕಿನ ಮಲಕನಹಳ್ಳಿ ಗ್ರಾಮದ ಬಳಿ ನಡೆದಿದೆ.
![ಬಟ್ಟೆ ತೊಳೆಯಲು ಹೋದ ಯುವತಿ ನದಿ ಪಾಲು Kumadvati river](https://etvbharatimages.akamaized.net/etvbharat/prod-images/768-512-09:24:38:1597679678-kn-hvr-03-girl-water-7202143-17082020211656-1708f-1597679216-709.jpg)
Kumadvati river
ನದಿಪಾಲಾದ ಯುವತಿಯನ್ನು (19) ವರ್ಷದ ಶಶಿಕಲಾ ಮಾಳಿಗೇರ ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಬಟ್ಟೆ ತೊಳೆಯಲು ಕುಮದ್ವತಿ ನದಿ ತೀರಕ್ಕೆ ಶಶಿಕಲಾ ಹೋಗಿದ್ದಳು ಎನ್ನಲಾಗಿದೆ. ಈ ಸಂದರ್ಭದಲ್ಲಿ ಕಾಲು ಜಾರಿ ನದಿ ಪಾಲಾಗಿದ್ದಾಳೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯನಡೆಸಿದ್ದಾರೆ. ಆದರೆ ಯುವತಿ ಶವ ಪತ್ತೆಯಾಗಿಲ್ಲ. ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.