ಕರ್ನಾಟಕ

karnataka

ETV Bharat / state

ಕೃಷಿ ಇಲಾಖೆಯಿಂದ ಹೆಚ್ಚು ಬಿತ್ತನೆ ಬೀಜ ನೀಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ - more seeds

ಹೆಚ್ಚು ಬಿತ್ತನೆ ಬೀಜ ವಿತರಿಸುವಂತೆ ಆಗ್ರಹಿಸಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದ ರೈತ ಸಂಪರ್ಕ ಕೇಂದ್ರದ ಮುಂದೆ ರೈತರು ಪ್ರತಿಭಟನೆ ನಡೆಸಿದರು.

ರೈತರ ಪ್ರತಿಭಟನೆ
ರೈತರ ಪ್ರತಿಭಟನೆ

By

Published : May 22, 2020, 7:28 PM IST

ಹಾವೇರಿ :ಹೆಚ್ಚು ಬಿತ್ತನೆ ಬೀಜ ವಿತರಿಸುವಂತೆ ಆಗ್ರಹಿಸಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದ ರೈತ ಸಂಪರ್ಕ ಕೇಂದ್ರದ ಮುಂದೆ ರೈತರು ಪ್ರತಿಭಟನೆ ನಡೆಸಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಇಲಾಖೆ ಒಂದು ಎಕರೆಗೆ 5 ಕೆಜಿಯ ಒಂದು ಪ್ಯಾಕೆಟ್ ಬಿತ್ತನೆ ಬೀಜ ನೀಡುತ್ತಿದೆ. ಇದರ ಬದಲು ಎಕರೆಗೆ ಎರಡು ಪ್ಯಾಕೆಟ್ ನೀಡುವಂತೆ ರೈತರು ಒತ್ತಾಯಿಸಿದರು. ಈಗ ನೀಡುತ್ತಿರುವ ಐದು ಕೆಜಿಯ ಪ್ಯಾಕೆಟ್ ಒಂದು ಎಕರೆಗೆ ಸಾಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಪ್ರತಿಭಟನೆ

ಒಂದು ಎಕರೆಗೆ ಎರಡು ಪ್ಯಾಕೆಟ್ ಬೀಜ ವಿತರಿಸುವವರೆಗೊ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಮಾಸ್ಕ್ ಧರಿಸಿ ಪ್ರತಿಭಟನೆ ನಡೆಸುವ ಮೂಲಕ ರೈತರು ಗಮನ ಸೆಳೆದರು.

ABOUT THE AUTHOR

...view details