ಹಾನಗಲ್( ಹಾವೇರಿ): ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹೇರೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕರಿಸಿದ್ದಪ್ಪ ಸಂಗಪ್ಪ ಕರಡಿ (44) ಮೃತ ರೈತ ಎನ್ನಲಾಗಿದೆ.
ಸಾಲಬಾಧೆ ತಾಳಲಾರದೆ ಹಾನಗಲ್ನಲ್ಲಿ ರೈತ ಆತ್ಮಹತ್ಯೆ - Farmer's suicide by debt
ಮೈತುಂಬ ಸಾಲ ಮಾಡಿಕೊಂಡಿದ್ದ ರೈತ ತಾನು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿಯ ಹಾನಗಲ್ ಬಳಿ ನಡೆದಿದೆ.
![ಸಾಲಬಾಧೆ ತಾಳಲಾರದೆ ಹಾನಗಲ್ನಲ್ಲಿ ರೈತ ಆತ್ಮಹತ್ಯೆ Farmer commits suicide in Hanagal because of debt](https://etvbharatimages.akamaized.net/etvbharat/prod-images/768-512-7158747-333-7158747-1589213671547.jpg)
ಸಾಲಬಾಧೆ ತಾಳಲಾರದೆ ಹಾನಗಲ್ನಲ್ಲಿ ರೈತ ಆತ್ಮಹತ್ಯೆ
ಅರ್ಧ ಎಕರೆ ಜಮೀನನಲ್ಲಿ ಬೆಳೆದ ಮೆಣಸಿನಕಾಯಿ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. 5 ಲಕ್ಷ ರೂಪಾಯಿ ಸಾಲ ಮಾಡಿ ಬೆಳೆ ಬೆಳೆದಿದ್ದ ಎನ್ನಲಾಗಿದೆ.
ಅಲ್ಲದೆ ಕೆಲವು ದಿನಗಳ ನಂತರ ತನ್ನ ಮಗಳ ಮದುವೆ ಮಾಡಬೇಕಿದ್ದ ರೈತ ಇದೀಗ ಅತಿಯಾದ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆಡೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.