ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ವಾಲ್ಮೀಕಿ ಸಮಾಜವನ್ನ ತುಳಿದಿದ್ದೇ ಕಾಂಗ್ರೆಸ್ : ಬಿಜೆಪಿ ಶಾಸಕ ರಾಜುಗೌಡ - ಹಾನಗಲ್

ಕಾಂಗ್ರೆಸ್​ಗೆ ವಾಲ್ಮೀಕಿ ಸಮಾಜದ ಮೇಲೆ ಪ್ರೀತಿ ಇದ್ದಿದ್ದರೆ, ಶ್ರೀರಾಮುಲು ವಿರುದ್ಧ ಅವರು ಚುನಾವಣೆಯಲ್ಲಿ ಯಾಕೆ ​ಸ್ಪರ್ಧಿಸ್ತಿದ್ರು ಎಂದು ಪ್ರಶ್ನಿಸಿದ್ರು. ನಮ್ಮ ಸಮಾಜಕ್ಕೆ ಯಾರ ಕೊಡುಗೆ ಎಷ್ಟಿದೆ ಅನ್ನೋದ್ರ ಬಗ್ಗೆ ಚರ್ಚೆ ಮಾಡುವುದಿದ್ರೆ ವೇದಿಕೆ ಸಿದ್ಧಪಡಿಸಿ ನಾವು ಬರುತ್ತೇವೆ ಎಂದು ಸಿದ್ದರಾಮಯ್ಯ ಅವರಿಗೆ ಸವಾಲೆಸೆದ್ರು..

ರಾಜುಗೌಡ
ರಾಜುಗೌಡ

By

Published : Oct 18, 2021, 6:43 PM IST

Updated : Oct 18, 2021, 6:59 PM IST

ಹಾವೇರಿ :ರಾಜ್ಯದಲ್ಲಿ ವಾಲ್ಮೀಕಿ ಸಮಾಜವನ್ನ ತುಳಿದಿದ್ದೇ ಕಾಂಗ್ರೆಸ್ ಎಂದು ಮಾಜಿ ಸಚಿವ ರಾಜುಗೌಡ ಆರೋಪಿಸಿದ್ದಾರೆ. ಹಾನಗಲ್ ತಾಲೂಕಿನ ಅಕ್ಕಿ ಆಲೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಚುನಾವಣೆ ಬಂದಾಗ ನಮ್ಮ ಸಮಾಜದ ಮೇಲೆ ಪ್ರೀತಿ ತೋರಿಸುವುದು ಬೇಡ ಎಂದು ತಿಳಿಸಿದರು.

ರಾಜ್ಯದಲ್ಲಿ ವಾಲ್ಮೀಕಿ ಸಮಾಜವನ್ನ ತುಳಿದಿದ್ದೇ ಕಾಂಗ್ರೆಸ್ : ಬಿಜೆಪಿ ಶಾಸಕ ರಾಜುಗೌಡ

ಚುನಾವಣೆ ಬಂದಾಗ ಜಾತಿಗಳ ನಡುವೆ ಜಗಳ ಹಚ್ಚಬೇಡಿ, ನಾವು ಅಭಿವೃದ್ಧಿ ಮೇಲೆ ಮತ ಕೇಳುತ್ತೇವೆ ಎಂದು ಕಾಂಗ್ರೆಸ್​ ವಿರುದ್ಧ ಹರಿಹಾಯ್ದರು. ಎಸ್​ಟಿ ಸಮುದಾಯಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅನ್ಯಾಯ ಮಾಡಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಎಸ್​ಟಿ ಸಮುದಾಯದ ಎಷ್ಟು ಶಾಸಕರಿಗೆ ಸಚಿವ ಸ್ಥಾನ ನೀಡಿದ್ರು. ಬಂದೀಖಾನೆ ಬಿಟ್ರೆ ಬೇರೆ ಖಾತೆ ನೀಡಿಲ್ಲ ಎಂದು ಕಿಡಿಕಾರಿದ್ರು.

ವಾಲ್ಮೀಕಿ ಸಮುದಾಯವನ್ನು ಗುರುತಿಸಿದ್ದು ಬಿಜೆಪಿ. ಕಳೆದ ಬಾರಿ ನಮ್ಮ ಸಮುದಾಯದ ನಾಲ್ವರಿಗೆ ಸಚಿವ ಸ್ಥಾನ ನೀಡಿತ್ತು. ಈ ಬಾರಿ ಇಬ್ಬರಿಗೆ ಮಂತ್ರಿಗಿರಿ ನೀಡಿದೆ. ಕಾಂಗ್ರೆಸ್​ನಲ್ಲಿ ಸತೀಶ್ ಜಾರಕಿಹೊಳಿ ಅಣ್ಣನನ್ನು ಬಳಸಿಕೊಂಡು ಏನೇನ್ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಅನ್ನೋದು ನಮ್ಮ ಸಮಾಜಕ್ಕೆ ಗೊತ್ತಿದೆ.

ಕಾಂಗ್ರೆಸ್​ಗೆ ವಾಲ್ಮೀಕಿ ಸಮಾಜದ ಮೇಲೆ ಪ್ರೀತಿ ಇದ್ದಿದ್ದರೆ, ಶ್ರೀರಾಮುಲು ವಿರುದ್ಧ ಅವರು ಚುನಾವಣೆಯಲ್ಲಿ ಯಾಕೆ ​ಸ್ಪರ್ಧಿಸ್ತಿದ್ರು ಎಂದು ಪ್ರಶ್ನಿಸಿದ್ರು. ನಮ್ಮ ಸಮಾಜಕ್ಕೆ ಯಾರ ಕೊಡುಗೆ ಎಷ್ಟಿದೆ ಅನ್ನೋದ್ರ ಬಗ್ಗೆ ಚರ್ಚೆ ಮಾಡುವುದಿದ್ರೆ ವೇದಿಕೆ ಸಿದ್ಧಪಡಿಸಿ ನಾವು ಬರುತ್ತೇವೆ ಎಂದು ಸಿದ್ದರಾಮಯ್ಯ ಅವರಿಗೆ ಸವಾಲೆಸೆದ್ರು.

ಇದನ್ನೂ ಓದಿ: ಯೋಗೇಶ್ ಗೌಡ ಹತ್ಯೆ ಪ್ರಕರಣ : ಸಿಬಿಐ ತನಿಖೆ ರದ್ದು ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಸಿದ್ದರಾಮಯ್ಯ ಮತ್ತು ಕಾಂಗ್ರೆಸ್​ನವರಿಗೆ ಕೇಸರಿ ಶಾಲಿನ ಬಗ್ಗೆ ಬಿಟ್ಟು ಬೇರೆ ಮಾತನಾಡಲು ಬರಲ್ಲ. ಕಾಂಗ್ರೆಸ್ ಮುಖಂಡರು ಎರಡು ಬಾರಿ ಆರ್​ಎಸ್​ಎಸ್​ ಬೈಠಕ್ ಕುಳಿತುಕೊಳ್ಳಲಿ. ಬಳಿಕ ಅವರೇ ಸಂಘದ ಬಗ್ಗೆ ಪ್ರಚಾರ ಮಾಡ್ತಾರೆ ಎಂದು ಟಾಂಗ್ ಕೊಟ್ಟರು.

Last Updated : Oct 18, 2021, 6:59 PM IST

ABOUT THE AUTHOR

...view details