ಕರ್ನಾಟಕ

karnataka

By

Published : Apr 11, 2019, 5:23 AM IST

ETV Bharat / state

ಮೋದಿ ಬಯೋಪಿಕ್​ ಬಿಡುಗಡೆಗೆ ಬ್ರೇಕ್​ : ಸ್ವಾಗತಾರ್ಹ ಕ್ರಮ ಎಂದ ಉಪೇಂದ್ರ

ಚುನಾವಣಾ ಆಯೋಗದ ಮೋದಿ ಬಯೋಪಿಕ್ ಬಿಡುಗಡೆ ಮುಂದೂಡಿರುವುದು ಸ್ವಾಗತಾರ್ಹ ಕ್ರಮ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ

ಮೋದಿ ಬಯೋಪಿಕ್​ಗೆ ಬ್ರೇಕ್​ ಹಾಕಿದ ಕ್ರಮ ಸರಿ ಎಂದ ಉಪೇಂದ್ರ

ಹಾವೇರಿ: ಚುನಾವಣಾ ಆಯೋಗ ಮೋದಿ ಬಯೋಪಿಕ್ ಸೇರಿದಂತೆ ವಿವಿಧ ಚಿತ್ರಗಳ ಬಿಡುಗಡೆ ಮುಂದೂಡಿರುವ ಕ್ರಮವನ್ನ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಸ್ವಾಗತಿಸಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ಮತದಾನ ಅನ್ನುವುದು ಗೌಪ್ಯವಾಗಿ ನಡೆಯುವಂತದ್ದು. ಅದರ ಮೇಲೆ ಪರಿಣಾಮ ಪ್ರಭಾವ ಬೀರುವ ಅಂಶಗಳು ಮೇಲೆ ಕಡಿವಾಣ ಹಾಕಬೇಕು ಎಂದರು.

ಮತದಾನ ಪೂರ್ವ ಹಾಗೂ ಮತದಾನದ ನಂತರದ ಸಮೀಕ್ಷೆಗಳು ಮತದಾರರ ಮೇಲೆ ಪರಿಣಾಮ ಬೀರುತ್ತವೆ. ಮಾಧ್ಯಮಗಳು ಸಹ ಫಲಿತಾಂಶಕ್ಕೂ ಮುನ್ನ ಈ ಪಕ್ಷಕ್ಕೆ ಇಷ್ಟು ಮತಗಳು, ಆ ಪಕ್ಷಕ್ಕೆ ಇಷ್ಟು ಮತಗಳು ಎಂದು ಪ್ರಸಾರ ಮಾಡಬಾರದು ಎಂದರು.

ಮೋದಿ ಬಯೋಪಿಕ್​ಗೆ ಬ್ರೇಕ್​ ಹಾಕಿದ ಕ್ರಮ ಸರಿ ಎಂದ ಉಪೇಂದ್ರ

ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಒಮ್ಮೆಲೆ ಹಿಂದೆ ಸರಿಯಲು ಕಾರಣವಿದೆ. ನಾವಾಗ ಆರಿಸಿದ ಅಭ್ಯರ್ಥಿಗಳು ಉತ್ತಮ ಪ್ರಜಾಕೀಯ ಪಕ್ಷದ ತತ್ವಗಳನ್ನ ಬಿಟ್ಟು, ಹಣ ಖರ್ಚು ಮಾಡಿ ಚುನಾವಣೆ ಎದುರಿಸುವ ಬಗ್ಗೆ ಮಾತನಾಡಿದರು. ಹಾಗಾಗಿ ಅಂದು ಅಭ್ಯರ್ಥಿಗಳನ್ನು ಬೇಡ ಎಂದೆವು ಎಂದು ತಿಳಿಸಿದರು.

ಒಳ್ಳೆಯ ಕಾರ್ಯ ಮಾಡಿದ್ದರೆ ಜನರು ತಾವಾಗಿಯೇ ಗುರ್ತಿಸಿ, ಆಯ್ಕೆ ಮಾಡುತ್ತಾರೆ. ಅದಕ್ಕಾಗಿ ಹಣದ ಹೊಳೆ ಹರಿಸಬೇಕಿಲ್ಲ ಎಂದೂ ಹೇಳಿದರು. ತಾವು ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ ಎಂದು ತಿಳಿಸಿದರು.

For All Latest Updates

TAGGED:

ABOUT THE AUTHOR

...view details