ಕರ್ನಾಟಕ

karnataka

ETV Bharat / state

ರಾಣೆಬೆನ್ನೂರು: ಲಾಠಿ ಬೀಸುವ ಬದಲು ಕೈ ಮುಗಿದು ಬೇಡಿಕೊಂಡ ಆರಕ್ಷಕರು - ಕರ್ನಾಟಕದಲ್ಲಿ ಕೊರೊನಾ ವೈರಸ್​ ಪ್ರಕರಣ

ರಾಣೆ ಬೆನ್ನೂರಿನಲ್ಲಿ ಲಾಕ್​​ಡೌನ್​ ನಡುವೆಯೂ ಜನ ಬೀದಿಗೆ ಬಂದಿದ್ದು, ಆರಕ್ಷಕರು ಲಾಠಿ ಪ್ರಯೋಗ ಮಾಡದೆ ಕೈ ಮುಗಿದು ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

Corona Lockdown: Cops request to people to don't came out from home ..!
ಕೊರೊನಾ ಲಾಕ್​ಡೌನ್: ಮನೆಯಿಂದ ಹೊರಬರದಂತೆ ಕೈ ಮುಗಿದ ಪೊಲೀಸರು..!

By

Published : Mar 25, 2020, 9:14 AM IST

ರಾಣೆಬೆನ್ನೂರು: ಲಾಕ್​​ಡೌನ ಇದ್ದರೂ ರಾಣೆಬೆನ್ನೂರಿನ ಜನ ಆದೇಶ ಉಲ್ಲಂಘನೆ ಮಾಡಿ ಬೆಳ್ಳಂಬೆಳಗ್ಗೆ ರಸ್ತೆಗೆ ಇಳಿದಿದ್ದಾರೆ. ಇದರಿಂದ ಪೋಲಿಸರು ಲಾಠಿ ಬೀಸುವ ಬದಲು ಕೈ ಮುಗಿದು ಬೇಡಿಕೊಳ್ಳುವಂತಹ ಸನ್ನಿವೇಶ ಕಂಡು ಬಂದಿದೆ.

ಮನೆಯಿಂದ ಹೊರಬರದಂತೆ ಕೈ ಮುಗಿದ ಪೊಲೀಸರು..!

ರಾಣೆಬೆನ್ನೂರ ಗ್ರಾಮಾಂತರ ಠಾಣೆಯ ಸಿಪಿಐ ಸುರೇಶ ಸಗರಿ ಹಾಗೂ ಪಿಎಸ್ಐ ಮೇಘರಾಜ್​ ಕೈ ಮುಗಿದು ಜನರಲ್ಲಿ ಮನೆಗೆ ತೆರಳುವಂತೆ ಬೇಡಿಕೊಳ್ಳುತ್ತಿದ್ದರು. ದಯಮಾಡಿ ಹೊರಗಡೆ ಬರಬೇಡಿ. ನಿಮ್ಮ ಆರೋಗ್ಯ ಸಲುವಾಗಿ ಮನೆಯಲ್ಲಿ ಇರಿ. ಮುಖಕ್ಕೆ ಮಾಸ್ಕ್ ಹಾಕಿಕೊಂಡು ಎಲ್ಲರ ಜೀವ ಉಳಿಸಿ ಹಾಗೂ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳಿ ಎಂದು ಜಾಗೃತಿ ‌ಮೂಡಿಸುತ್ತಿದ್ದರು.

ABOUT THE AUTHOR

...view details