ರಾಣೆಬೆನ್ನೂರು: ಲಾಕ್ಡೌನ ಇದ್ದರೂ ರಾಣೆಬೆನ್ನೂರಿನ ಜನ ಆದೇಶ ಉಲ್ಲಂಘನೆ ಮಾಡಿ ಬೆಳ್ಳಂಬೆಳಗ್ಗೆ ರಸ್ತೆಗೆ ಇಳಿದಿದ್ದಾರೆ. ಇದರಿಂದ ಪೋಲಿಸರು ಲಾಠಿ ಬೀಸುವ ಬದಲು ಕೈ ಮುಗಿದು ಬೇಡಿಕೊಳ್ಳುವಂತಹ ಸನ್ನಿವೇಶ ಕಂಡು ಬಂದಿದೆ.
ರಾಣೆಬೆನ್ನೂರು: ಲಾಠಿ ಬೀಸುವ ಬದಲು ಕೈ ಮುಗಿದು ಬೇಡಿಕೊಂಡ ಆರಕ್ಷಕರು - ಕರ್ನಾಟಕದಲ್ಲಿ ಕೊರೊನಾ ವೈರಸ್ ಪ್ರಕರಣ
ರಾಣೆ ಬೆನ್ನೂರಿನಲ್ಲಿ ಲಾಕ್ಡೌನ್ ನಡುವೆಯೂ ಜನ ಬೀದಿಗೆ ಬಂದಿದ್ದು, ಆರಕ್ಷಕರು ಲಾಠಿ ಪ್ರಯೋಗ ಮಾಡದೆ ಕೈ ಮುಗಿದು ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
![ರಾಣೆಬೆನ್ನೂರು: ಲಾಠಿ ಬೀಸುವ ಬದಲು ಕೈ ಮುಗಿದು ಬೇಡಿಕೊಂಡ ಆರಕ್ಷಕರು Corona Lockdown: Cops request to people to don't came out from home ..!](https://etvbharatimages.akamaized.net/etvbharat/prod-images/768-512-6534201-thumbnail-3x2-bjh.jpg)
ಕೊರೊನಾ ಲಾಕ್ಡೌನ್: ಮನೆಯಿಂದ ಹೊರಬರದಂತೆ ಕೈ ಮುಗಿದ ಪೊಲೀಸರು..!
ಮನೆಯಿಂದ ಹೊರಬರದಂತೆ ಕೈ ಮುಗಿದ ಪೊಲೀಸರು..!
ರಾಣೆಬೆನ್ನೂರ ಗ್ರಾಮಾಂತರ ಠಾಣೆಯ ಸಿಪಿಐ ಸುರೇಶ ಸಗರಿ ಹಾಗೂ ಪಿಎಸ್ಐ ಮೇಘರಾಜ್ ಕೈ ಮುಗಿದು ಜನರಲ್ಲಿ ಮನೆಗೆ ತೆರಳುವಂತೆ ಬೇಡಿಕೊಳ್ಳುತ್ತಿದ್ದರು. ದಯಮಾಡಿ ಹೊರಗಡೆ ಬರಬೇಡಿ. ನಿಮ್ಮ ಆರೋಗ್ಯ ಸಲುವಾಗಿ ಮನೆಯಲ್ಲಿ ಇರಿ. ಮುಖಕ್ಕೆ ಮಾಸ್ಕ್ ಹಾಕಿಕೊಂಡು ಎಲ್ಲರ ಜೀವ ಉಳಿಸಿ ಹಾಗೂ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳಿ ಎಂದು ಜಾಗೃತಿ ಮೂಡಿಸುತ್ತಿದ್ದರು.