ರಾಣೇಬೆನ್ನೂರು: ಕ್ಷೇತ್ರದ ಅನರ್ಹ ಶಾಸಕ ಆರ್.ಶಂಕರ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಘಟನೆ ತಾಲೂಕಿನ ಕರೂರು ಗ್ರಾಮದಲ್ಲಿ ನಡೆದಿದೆ.
ಅನರ್ಹ...ಅನರ್ಹ... ಅನರ್ಹ ಎಂದು ಆರ್.ಶಂಕರ್ಗೆ ಕಿಚಾಯಿಸಿದ ಕೈ ಕಾರ್ಯಕರ್ತರು - ರಾಣೀಬೆನ್ನೂರು ಉಪಚುನಾವಣೆ
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಕ್ಷೇತ್ರದ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದ್ದು, ಈಗ ಕಾಂಗ್ರೆಸ್ ಮತ್ತು ಮತ್ತು ಬಿಜೆಪಿ ನಡುವೆ ಜಟಾಪಟಿ ಜೋರಾಗಿದೆ.
ಅನರ್ಹ ಶಾಸಕ ಆರ್.ಶಂಕರ್,ಬಿಜೆಪಿ ಅಭ್ಯರ್ಥಿ ಭಾಷಣಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಅಡ್ಡಿ!
ಶನಿವಾರ ರಾತ್ರಿ ಬಿಜೆಪಿ ಅಭ್ಯರ್ಥಿ ಅರುಣಕುಮಾರ್ ಪೂಜಾರ ಪರ ಆರ್.ಶಂಕರ್ ಮತಯಾಚನೆಗೆ ತೆರಳಿದಾಗ ಈ ಪ್ರಸಂಗ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರು ಅನರ್ಹ, ಅನರ್ಹ ಎಂದು ಘೋಷಣೆ ಕೂಗಿ ನಂತರ ಕಾರ್ಯಕರ್ತರು ಪ್ರಚಾರ ವಾಹನದಿಂದ ಕೆಳಗಿಳಿಯುವಂತೆ ಆಗ್ರಹಿಸಿದ್ದಾರೆ. ಇದರಿಂದ ಮುಜಗರಕ್ಕೆ ಒಳಗಾದ ಆರ್.ಶಂಕರ್ ಅರ್ಧಕ್ಕೆ ಭಾಷಣ ಮುಗಿಸಿದ್ದಾರೆ.
ನಂತರ ಬಿಜೆಪಿ ಅಭ್ಯರ್ಥಿ ಅರುಣಕುಮಾರ್ ಭಾಷಣ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವೋಟ್ ಫಾರ್ ಕಾಂಗ್ರೆಸ್, ವೋಟ್ ಫಾರ್ ಕಾಂಗ್ರೆಸ್ ಅಂತ ಜೋರಾಗಿ ಕೂಗಿದ್ದಾರೆ. ಇದರಿಂದ ಬಿಜೆಪಿ ಅಭ್ಯರ್ಥಿ ಭಾಷಣ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.