ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿಯಾದ ಪರಿಣಾಮ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆ ಹಿರೇಕೆರೂರು ತಾಲೂಕಿನ ಅಬಲೂರು ಕ್ರಾಸ್ ಬಳಿ ನಡೆದಿದೆ.
ಹಿರೇಕೆರೂರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿ: ಇಬ್ಬರ ದುರ್ಮರಣ - ಹಿರೇಕೆರೂರು ಕ್ರೈಂ ನ್ಯೂಸ್
ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿಯಾದ ಪರಿಣಾಮ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಅಬಲೂರು ಕ್ರಾಸ್ ಬಳಿ ನಡೆದಿದೆ.
![ಹಿರೇಕೆರೂರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಲ್ಟಿ: ಇಬ್ಬರ ದುರ್ಮರಣ Car Accident in Hirekeroor: Two People died](https://etvbharatimages.akamaized.net/etvbharat/prod-images/768-512-6061031-thumbnail-3x2-net.jpg)
ಮೃತ ಕಾರ್ತಿಕ ಈಳಿಗೇರ ಮತ್ತು ಪ್ರವೀಣ ಬೊಗಾವಿ
ಕಾರ್ತಿಕ ಈಳಿಗೇರ (23) ಮತ್ತು ಪ್ರವೀಣ ಬೊಗಾವಿ (26) ಮೃತ ದುರ್ದೈವಿಗಳು. ರಾಣೆಬೆನ್ನೂರು ನಗರದಿಂದ ಹಂಸಭಾವಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಸಂತೋಷ ರಾಗಿಕೊಪ್ಪ ಎಂಬಾತ ಗಾಯಗೊಂಡಿದ್ದು ಹಂಸಭಾವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಂಸಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.