ಹಾವೇರಿ:ಪ್ರಧಾನಿ ನರೇಂದ್ರ ಮೋದಿ, ಸಿ.ಎಂ.ಯಡಿಯೂರಪ್ಪ ಕೋವಿಡ್ ಹಾಗೂ ಪ್ರಕೃತಿ ವಿಕೋಪಗಳನ್ನು ಯಶಸ್ವಿಯಾಗಿ ಎದುರಿಸಿದ್ದಾರೆ. ಅಲ್ಲದೆ ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಹೀಗಾಗಿ, ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಮೋದಿ-ಬಿಎಸ್ವೈ ಸಾಧನೆಗಳಿಂದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ: ಬಿ.ಸಿ.ಪಾಟೀಲ್ - BC Patil talks about bye election at haveri
ಈ ಹಿಂದೆ ಸಚಿವರು ಬಂದರೆ ಸಾಕು ರೈತ ಮುಖಂಡರು ಮುತ್ತಿಗೆ ಹಾಕುತ್ತಿದ್ದರು. ಆದರೆ ತಾವು ಕೃಷಿ ಸಚಿವನಾದ ನಂತರ ಈ ಪರಿಸ್ಥಿತಿ ಇಲ್ಲ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.
![ಮೋದಿ-ಬಿಎಸ್ವೈ ಸಾಧನೆಗಳಿಂದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ: ಬಿ.ಸಿ.ಪಾಟೀಲ್ bc-patil](https://etvbharatimages.akamaized.net/etvbharat/prod-images/768-512-9223185-thumbnail-3x2-news.jpg)
ಬಿ.ಸಿ.ಪಾಟೀಲ್
ಬಿ.ಸಿ.ಪಾಟೀಲ್ ಮಾತನಾಡಿದರು
ನಗರದಲ್ಲಿ ಮಾತನಾಡಿದ ಅವರು, ಈ ಹಿಂದೆ ಸಚಿವರು ಬಂದರೆ ಸಾಕು ರೈತ ಮುಖಂಡರು ಮುತ್ತಿಗೆ ಹಾಕುತ್ತಿದ್ದರು. ಆದರೆ ತಾವು ಕೃಷಿ ಸಚಿವನಾದ ನಂತರ ಈ ಪರಿಸ್ಥಿತಿ ಇಲ್ಲ ಎಂದು ತಿಳಿಸಿದರು.
ನಾನು ಕೃಷಿ ಸಚಿವನಾದ ಮೇಲೆ ರೈತರಿಗೆ ಬರಬೇಕಾಗಿದ್ದ ಪರಿಹಾರ ದೊರಕಿಸಿಕೊಟ್ಟಿದ್ದೇನೆ ಎಂದ ಅವರು, ಮುಂದೆ ಬರುವ ಪರಿಹಾರವನ್ನ ಶೀಘ್ರದಲ್ಲಿ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.