ಕರ್ನಾಟಕ

karnataka

ETV Bharat / state

ಕಸದಿಂದ ಗೊಬ್ಬರ ರೆಡಿ: ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಸುಲಭ ಪರಿಹಾರ ಕಂಡುಕೊಂಡ ಬ್ಯಾಡಗಿ ಪುರಸಭೆ - ತ್ಯಾಜ್ಯ ವಿಲೇವಾರಿಗೆ ಬ್ಯಾಡಗಿ ಪುರಸಭೆ ಪರಿಹಾರ

ಕಸದಿಂದ ಸಾವಯವ ಮತ್ತು ಎರೆಹುಳು ಗೊಬ್ಬರ ತಯಾರಿಸುವ ಮೂಲಕ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಬ್ಯಾಡಗಿ ಪುರಸಭೆ ಪರಿಹಾರ ಕಂಡು ಕೊಂಡಿದೆ.

Byadagi municipality preparing Organic fertilizer from garabage
ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಸುಲಭ ಪರಿಹಾರ ಕಂಡುಕೊಂಡ ಬ್ಯಾಡಗಿ ಪುರಸಭೆ

By

Published : Nov 26, 2020, 5:05 PM IST

ಹಾವೇರಿ:ಬೆಂಗಳೂರು ಸೇರಿದಂತೆ ರಾಜ್ಯದ ನಗರ, ಪುರಸಭೆ, ಪಟ್ಟಣ ಆಡಳಿತಗಳು ಕಸ ವಿಲೇವಾರಿ ಸಮಸ್ಯೆ ಎದುರಿಸುತ್ತಿದ್ದರೆ, ಜಿಲ್ಲೆಯ ಬ್ಯಾಡಗಿ ಪುರಸಭೆ ಮಾತ್ರ, ನಗರದಲ್ಲಿ ಸಂಗ್ರಹವಾಗುವ ಕಸ ವಿಂಗಡಣೆ ಮಾಡಿ ಸಾವಯವ ಮತ್ತು ಎರೆಹುಳು ಗೊಬ್ಬರ ತಯಾರಿಸುತ್ತಿದೆ. ಈ ಮೂಲಕ ಕಸದ ಸಮಸ್ಯೆಗೆ ಸುಲಭ ಪರಿಹಾರ ಕಂಡುಕೊಂಡಿದೆ.

ಬ್ಯಾಡಗಿ ಪಟ್ಟಣದಲ್ಲಿ ನಿತ್ಯ 9 ಟನ್‌ಗಳಷ್ಟು ಕಸ ಉತ್ಪಾದನೆಯಾಗುತ್ತದೆ. ಈ ಕಸದಲ್ಲಿನ ಅಪಾಯಕಾರಿ ವಸ್ತುಗಳನ್ನು ತೆಗೆದು, ಹಸಿ ಮತ್ತು ಒಣ ಕಸವನ್ನಾಗಿ ವಿಂಗಡಿಸಲಾಗುತ್ತದೆ. ಇವುಗಳಿಂದ ಸಾವಯವ ಮತ್ತು ಎರೆಹುಳು ಗೊಬ್ಬರ ತಯಾರಿಸಲಾಗುತ್ತಿದೆ. ಇದೀಗ, ಕಳೆದ 13 ವರ್ಷಗಳಿಂದ ಸುರಿದ ಕಸದಿಂದ ಉಂಟಾದ ಗುಡ್ಡೆಯಲ್ಲಿ, ಫಲವತ್ತಾದ ಮಣ್ಣು ಸಿದ್ದಗೊಂಡಿದೆ. ಈ ಮಣ್ಣನ್ನ ಬೆಂಗಳೂರು ಹೆಬ್ಬಾಳದ ಕೃಷಿ ವಿವಿಗೆ ಕಳಿಸಿ ಫಲವತ್ತತೆ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಯಲ್ಲಿ ಮಣ್ಣು ಅತ್ಯಂತ ಫಲವತ್ತತೆಯಿಂದ ಕೂಡಿರುವುದಾಗಿ ತಿಳಿದು ಬಂದಿದ್ದು, ತೆಂಗು, ಅಡಿಕೆ ಕೃಷಿಗೆ ಉಪಯೋಗಿಯಾಗಿದೆ. ಹೀಗಾಗಿ, ಈ ಮಣ್ಣಿನ ಗುಡ್ಡೆಯಿಂದ ಸಾವಯವ ಗೊಬ್ಬರ ಉತ್ಪಾದಿಸಲಾಗುತ್ತಿದೆ. ಅಲ್ಲದೇ, ತ್ಯಾಜ್ಯವಿಲೇವಾರಿ ಘಟಕದಲ್ಲಿ ಎರೆಹುಳು ಗೊಬ್ಬರ ಉತ್ಪಾದನೆಗೂ ಘಟಕ ಸಿದ್ದಪಡಿಸಲಾಗಿದೆ. ಒಟ್ಟು 18 ಬ್ಲಾಕ್‌ಗಳಲ್ಲಿ ಈ ಎರೆಹುಳು ಗೊಬ್ಬರ ತಯಾರಿಸಲಾಗುತ್ತದೆ.

ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಸುಲಭ ಪರಿಹಾರ ಕಂಡುಕೊಂಡ ಬ್ಯಾಡಗಿ ಪುರಸಭೆ

ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಉತ್ಪಾದನೆಯಾಗುವ ಸಾವಯವ ಗೊಬ್ಬರವನ್ನು ಪುರಸಭೆ ಕೆಜಿಗೆ ಮೂರು ರೂಪಾಯಿಯಂತೆ ರೈತರಿಗೆ ಮಾರಾಟ ಮಾಡುತ್ತಿದೆ. ಮನೆಗೆ ಗೊಬ್ಬರ ವಿತರಣೆ ಮಾಡಬೇಕಾದರೆ ಕೆಜಿಗೆ 5 ರೂಪಾಯಿ ನಿಗದಿಪಡಿಸಲಾಗಿದೆ. ಪುರಸಭೆ ಉತ್ಪಾದಿಸುವ ಸಾವಯವ ಗೊಬ್ಬರಕ್ಕೆ ಅಧಿಕ ಬೇಡಿಕೆ ಇದ್ದು, ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ರೈತರು ಕೂಡ ಈ ಗೊಬ್ಬರ ಖರೀದಿಗೆ ಆಗಮಿಸುತ್ತಿದ್ದಾರೆ. ನಗರ, ಪಟ್ಟಣಗಳು ಕಸದ ಸಮಸ್ಯೆಯಿಂದ ಬಳಲುತ್ತಿರುವ ಈ ದಿನಗಳಲ್ಲಿ ಬ್ಯಾಡಗಿ ಪುರಸಭೆಯ ಈ ಕಾರ್ಯ ಪರಿಸರ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

For All Latest Updates

TAGGED:

ABOUT THE AUTHOR

...view details