ಹಾವೇರಿ: ಈಗಾಗಲೇ ಹಿರೇಕೆರೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಗೆದ್ದಾಗಿದೆ. ಗೆಲುವಿನ ಅಂತರವಷ್ಟೇ ಗೊತ್ತಾಗಬೇಕಿದೆ ಎಂದು ಸಿ.ಎಂ.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮತ ಎಣಿಕೆ ದಿನ ಕೈ-ತೆನೆ ಏಜೆಂಟರು ಓಡಬೇಕು, ಆ ರೀತಿ ಬಿಜೆಪಿಗೆ ವೋಟ್ ಮಾಡಿ ಎಂದ ಬಿಎಸ್ವೈ - ಹಿರೇಕೆರೂರು ವಿಧಾನಸಭೆ ಉಪಚುನಾವಣೆ
ಮತ ಎಣಿಕೆ ದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಏಜೆಂಟರು ಮತ ಎಣಿಕೆ ಕೇಂದ್ರದಿಂದ ಓಡಿ ಹೋಗಬೇಕು. ಆ ರೀತಿ ಬಿಜೆಪಿ ವೋಟ್ ಮಾಡಿ ಎಂದು ಬಿ.ಎಸ್.ಯಡಿಯುರಪ್ಪ ಹೇಳಿದ್ದಾರೆ.
![ಮತ ಎಣಿಕೆ ದಿನ ಕೈ-ತೆನೆ ಏಜೆಂಟರು ಓಡಬೇಕು, ಆ ರೀತಿ ಬಿಜೆಪಿಗೆ ವೋಟ್ ಮಾಡಿ ಎಂದ ಬಿಎಸ್ವೈ BS Yediyurappa talks about bc Patil,ಬಿ.ಸಿ.ಪಾಟೀಲ್ ಬಗ್ಗೆ ಯಡಿಯೂರಪ್ಪ ಹೇಳಿಕೆ](https://etvbharatimages.akamaized.net/etvbharat/prod-images/768-512-5205410-thumbnail-3x2-brm.jpg)
ಬಿ.ಎಸ್.ಯಡಿಯುರಪ್ಪ
ಬಿ.ಎಸ್.ಯಡಿಯುರಪ್ಪ, ಮುಖ್ಯಮಂತ್ರಿ
ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಾಸೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಮತದಾರರು ಜೆಡಿಎಸ್ ಮತ್ತು ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಬೇಕು ಎಂದಿದ್ದಾರೆ.
15 ಕ್ಷೇತ್ರದಲ್ಲಿ ಡಿಸೆಂಬರ್ 9ರಂದು ಮತ ಎಣಿಕೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಏಜೆಂಟರು ಮತ ಎಣಿಕೆ ಕೇಂದ್ರದಿಂದ ಓಡಿ ಹೋಗಬೇಕು. ಆ ರೀತಿ ಮತದಾರರು ಬಿಜೆಪಿಗೆ ಮತ ಹಾಕಬೇಕು. ಬಾಯಿಗೆ ಬಂದಂತೆ ಮಾತನಾಡುತ್ತಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರಿಗೆ ತಕ್ಕ ಉತ್ತರ ನೀಡುವಂತೆ ಬಿಎಸ್ವೈ ಮನವಿ ಮಾಡಿದರು.