ಕರ್ನಾಟಕ

karnataka

ETV Bharat / state

ಮತ ಎಣಿಕೆ ದಿನ ಕೈ-ತೆನೆ ಏಜೆಂಟರು ಓಡಬೇಕು, ಆ ರೀತಿ ಬಿಜೆಪಿಗೆ ವೋಟ್​​​ ಮಾಡಿ ಎಂದ ಬಿಎಸ್​ವೈ

ಮತ ಎಣಿಕೆ ದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಏಜೆಂಟರು ಮತ ಎಣಿಕೆ ಕೇಂದ್ರದಿಂದ ಓಡಿ ಹೋಗಬೇಕು. ಆ ರೀತಿ ಬಿಜೆಪಿ ವೋಟ್​ ಮಾಡಿ ಎಂದು ಬಿ.ಎಸ್.ಯಡಿಯುರಪ್ಪ ಹೇಳಿದ್ದಾರೆ.

By

Published : Nov 28, 2019, 5:33 PM IST

BS Yediyurappa talks about bc Patil,ಬಿ.ಸಿ.ಪಾಟೀಲ್​ ಬಗ್ಗೆ ಯಡಿಯೂರಪ್ಪ ಹೇಳಿಕೆ
ಬಿ.ಎಸ್.ಯಡಿಯುರಪ್ಪ

ಹಾವೇರಿ: ಈಗಾಗಲೇ ಹಿರೇಕೆರೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಗೆದ್ದಾಗಿದೆ. ಗೆಲುವಿನ ಅಂತರವಷ್ಟೇ ಗೊತ್ತಾಗಬೇಕಿದೆ ಎಂದು ಸಿ.ಎಂ.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿ.ಎಸ್.ಯಡಿಯುರಪ್ಪ, ಮುಖ್ಯಮಂತ್ರಿ

ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಾಸೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಮತದಾರರು ಜೆಡಿಎಸ್ ಮತ್ತು ಕಾಂಗ್ರೆಸ್​ಗೆ ತಕ್ಕ ಪಾಠ ಕಲಿಸಬೇಕು ಎಂದಿದ್ದಾರೆ.

15 ಕ್ಷೇತ್ರದಲ್ಲಿ ಡಿಸೆಂಬರ್ 9ರಂದು ಮತ ಎಣಿಕೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಏಜೆಂಟರು ಮತ ಎಣಿಕೆ ಕೇಂದ್ರದಿಂದ ಓಡಿ ಹೋಗಬೇಕು. ಆ ರೀತಿ ಮತದಾರರು ಬಿಜೆಪಿಗೆ ಮತ ಹಾಕಬೇಕು. ಬಾಯಿಗೆ ಬಂದಂತೆ ಮಾತನಾಡುತ್ತಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರಿಗೆ ತಕ್ಕ ಉತ್ತರ ನೀಡುವಂತೆ ಬಿಎಸ್​ವೈ ಮನವಿ ಮಾಡಿದರು.

ABOUT THE AUTHOR

...view details