ರಾಣೇಬೆನ್ನೂರ:ಹಾವು ಕಚ್ಚಿ ಬಾಲಕನೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಹಿರೇಮಾಗನೂರ ಗ್ರಾಮದಲ್ಲಿ ನಡೆದಿದೆ.
ರಾಣೇಬೆನ್ನೂರು: ಹಾವು ಕಚ್ಚಿ ಬಾಲಕ ಸಾವು
ರಾಣೇಬೆನ್ನೂರು ತಾಲೂಕಿನ ಹಿರೇಮಾಗನೂರ ಗ್ರಾಮದಲ್ಲಿ ಹಾವು ಕಚ್ಚಿ ಬಾಲಕನೋರ್ವ ಸಾವನ್ನಪ್ಪಿದ್ದಾನೆ.
Boy died
ಶರತ ಪರಮೇಶಪ್ಪ ಮಾಗನೂರು (8) ಮೃತಪಟ್ಟ ಬಾಲಕ. ಕಳೆದ ಹತ್ತು ದಿನಗಳ ಹಿಂದೆ ವಿಷ ಜಂತು ಬಾಲಕನಿಗೆ ಕಚ್ಚಿತ್ತು. ತಕ್ಷಣ ಬಾಲಕನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.
ಹಲಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.