ಕರ್ನಾಟಕ

karnataka

By

Published : May 29, 2020, 2:49 PM IST

Updated : May 29, 2020, 3:13 PM IST

ETV Bharat / state

ನಮ್ಮದು ಶಿಸ್ತಿನ ಪಕ್ಷ, ಭಿನ್ನಾಭಿಪ್ರಾಯಗಳಿಲ್ಲ: 'ಅತೃಪ್ತರ ಸಭೆ' ವದಂತಿ ಕುರಿತು ಬೊಮ್ಮಾಯಿ ಹೇಳಿಕೆ

ಆಗಾಗ ಊಟಕ್ಕೆ ಸೇರುವುದು ನಮ್ಮ ಶಾಸಕರಲ್ಲಿ ಮೊದಲಿನಿಂದಲೂ ಇರುವ ಪದ್ಧತಿ. ಇದೂ ಕೂಡ ಅದೇ ರೀತಿ ಔತಣ ಕೂಟವೇ ಹೊರತು ಬೇರೇನೂ ಇಲ್ಲ. ಎಲ್ಲ ಶಾಸಕರು ಬಿಎಸ್​ವೈ ನೇತೃತ್ವದಲ್ಲಿ ಒಗ್ಗಟ್ಟಾಗಿದ್ದಾರೆ ಎಂದರು.

basavaraja bommayi
ಗೃಹ ಸಚಿವ ಬಸವರಾಜ ಬೊಮ್ಮಾಯಿ

ಹಾವೇರಿ: ಮಾಜಿ ಸಚಿವ ಉಮೇಶ್​ ಕತ್ತಿ ನೇತೃತ್ವದಲ್ಲಿ ಬಿಜೆಪಿಯ ಅತೃಪ್ತ ಶಾಸಕರು ಸಭೆ ನಡೆಸಿದ್ದಾರೆ ಎಂಬುದನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಲ್ಲಗೆಳೆದಿದ್ದಾರೆ.

ಆಗಾಗ ಊಟಕ್ಕೆ ಸೇರುವುದು ನಮ್ಮ ಶಾಸಕರಲ್ಲಿ ಮೊದಲಿನಿಂದಲೂ ಇರುವ ಪದ್ಧತಿ. ಇದೂ ಕೂಡ ಅದೇ ರೀತಿ ಔತಣ ಕೂಟವೇ ಹೊರತು ಬೇರೇನೂ ಇಲ್ಲ. ಎಲ್ಲ ಶಾಸಕರು ಬಿಎಸ್​ವೈ ನೇತೃತ್ವದಲ್ಲಿ ಒಗ್ಗಟ್ಟಾಗಿದ್ದಾರೆ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ

ನಮ್ಮದು ಶಿಸ್ತಿನ ಪಕ್ಷ. ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ ಎಂಬ ಅದಮ್ಯವಾದ ವಿಶ್ವಾಸವಿದೆ ಎಂದು ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

Last Updated : May 29, 2020, 3:13 PM IST

ABOUT THE AUTHOR

...view details