ಹಾವೇರಿ :ಕರಾವಳಿ ಭಾಗದಲ್ಲಿನ ಕೊಲೆ ಪ್ರಕರಣಗಳು ಬಹಳ ನೋವು ತರುವ ಸಂಗತಿ. ಈ ರೀತಿಯ ಘಟನೆಗಳು ಸಂಭವಿಸಬಾರದು. ಇಂಟಲಿಜೆನ್ಸ್ನವರು ಈ ರೀತಿಯ ಘಟನೆಗಳ ಕುರಿತು ಇನ್ನಷ್ಟು ಎಚ್ಚರ ವಹಿಸಬೇಕು. ಆಗ ಮಾತ್ರ ಈ ದುಷ್ಕೃತ್ಯಗಳನ್ನು ತಡೆಯಲು ಸಾಧ್ಯ ಎಂದು ಎಂದು ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಜಾತಿ-ಧರ್ಮಗಳು ಈ ವಿಚಾರದಲ್ಲಿ ಅಡ್ಡ ಬರಬಾರದು. ಸರ್ಕಾರ ಯಾರ ಮೇಲಾದರೂ ನಿರ್ಧಾಕ್ಷಿಣ್ಯದಿಂದ ಕ್ರಮ ಕೈಗೊಳ್ಳಬೇಕು. ಈ ರೀತಿ ಘಟನೆಗೆ ತುಂಬಾ ವರ್ಷಗಳ ನಂತರ ಶಿಕ್ಷೆ ಆದರೆ ಪ್ರಯೋಜನ ಇಲ್ಲ. ಕೂಡಲೇ ಕ್ರಮ ಕೈಗೊಳ್ಳುವಂತಾಗಬೇಕು. ಒಂದು ಅಪರಾಧಕ್ಕೆ 20 ಕ್ರಮಗಳನ್ನು ಅನುಸರಿಸುವಾಗ ವರ್ಷಗಳೇ ಕಳೆದು ಹೋಗುತ್ತದೆ ಎಂದರು.