ಹಾವೇರಿ: ಪಂಚಮಸಾಲಿ ಪೀಠ ಹುಟ್ಟಿರುವುದೇ ಪಂಚಮಸಾಲಿಗೆ ರಾಜ್ಯದಲ್ಲಿ 2ಎ ಮತ್ತು ಕೇಂದ್ರದಲ್ಲಿ ಒಬಿಸಿ ಸ್ಥಾನ ದೊರಕಿಸಲು ಎಂದು ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
2ಎ ಮೀಸಲಾತಿಗಾಗಿ ಪಂಚಮಸಾಲಿ ಪೀಠ ಹುಟ್ಟಿದೆ: ಬಸವಜಯ ಮೃತ್ಯುಂಜಯ ಶ್ರೀ - Kudalasangama
ಇದುವರೆಗೆ ರಾಜ್ಯವನ್ನಾಳಿದ ಸರ್ಕಾರಗಳು ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚಿವೆ ಎಂದು ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆರೋಪಿಸಿದ್ದಾರೆ.
![2ಎ ಮೀಸಲಾತಿಗಾಗಿ ಪಂಚಮಸಾಲಿ ಪೀಠ ಹುಟ್ಟಿದೆ: ಬಸವಜಯ ಮೃತ್ಯುಂಜಯ ಶ್ರೀ dsdd](https://etvbharatimages.akamaized.net/etvbharat/prod-images/768-512-10117463-thumbnail-3x2-vish.jpg)
ಬಸವಜಯ ಮೃತ್ಯುಂಜಯ ಶ್ರೀ ಹೇಳಿಕೆ
ಬಸವಜಯ ಮೃತ್ಯುಂಜಯ ಶ್ರೀ
ನಗರದಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪಗೆ ನಾವು ಸಚಿವ, ನಿಗಮ ಮಂಡಳಿ ಸ್ಥಾನ ಕೇಳುತ್ತಿಲ್ಲ. ನಮಗೆ ಬೇಕಾಗಿರುವುದು ಪಂಚಮಸಾಲಿಗೆ 2ಎ ಮೀಸಲಾತಿ. ಎಲ್ಲದಕ್ಕೂ ಒಂದು ಮಿತಿ ಇರುತ್ತೆ. ಆ ಮಿತಿ ದಾಟಿದರೆ ಆಪಾಯ ಕಟ್ಟಿಟ್ಟ ಬುತ್ತಿ.
ಕಡಿಮೆ ಸಂಖ್ಯೆಯ ಆರ್ಥಿಕ ಸಬಲರಿಗೆ ಮೀಸಲಾತಿ ಸಿಕ್ಕಿದೆ. ಆದರೆ ಕಡಿಮೆ ಸಂಖ್ಯೆಯಲ್ಲಿರುವ ಅರ್ಥಿಕ ದುರ್ಲಬರಿಗೆ ಮೀಸಲಾತಿ ಸಿಕ್ಕಿಲ್ಲ. ಸಿಎಂ ಯಡಿಯೂರಪ್ಪ ತಮ್ಮ ಬೇಡಿಕೆಗೆ ಸ್ಪಂದಿಸಬೇಕು ಎಂದು ಶ್ರೀಗಳು ಒತ್ತಾಯಿಸಿದ್ದಾರೆ.