ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ ಬಣವೆಗಳಿಗೆ ಬೆಂಕಿ ಹತ್ತುವ ಪ್ರಕರಣಗಳೇ ಹೆಚ್ಚು - haveri latest news

ರೈತರಿಗೆ ಸಂಬಂಧಿಸಿದ ಉತ್ಪನ್ನಗಳಲ್ಲಿಯೇ ಹೆಚ್ಚು ಬೆಂಕಿ ಹೊತ್ತಿರುವುದು ಇನ್ನೂ ಒಂದೇ ಒಂದು ಕಾರ್ಖಾನೆಯಲ್ಲಿ ಅಗ್ನಿಅವಘಡ ಪ್ರಕರಣ ನಡೆದಿದೆ. ಹೆಚ್ಚಿನ ಹಾನಿ ಸಂಭವಿಸಿಲ್ಲ..

54 cases registered in haveri fire stations
ಹಾವೇರಿಯಲ್ಲಿ ಬಣವೆಗಳಿಗೆ ಬೆಂಕಿ ಹತ್ತುವ ಪ್ರಕರಣಗಳೇ ಹೆಚ್ಚು

By

Published : Mar 31, 2021, 4:33 PM IST

ಹಾವೇರಿ: ಜಿಲ್ಲೆಯಲ್ಲಿ ರೈತರ ಜಮೀನಿನಲ್ಲಿರುವ ಬಣವೆಗಳಿಗೆ ಮತ್ತು ರಾಶಿ ಮಾಡಿದ ತೆನೆರಾಶಿಗಳಲ್ಲಿ ಅಗ್ನಿ ಅವಘಡಗಳು ಸಂಭಿಸಿವೆ. ಬೇರೆ ರೀತಿಯ ಅಗ್ನಿ ಅವಘಡಗಳು ಕಡಿಮೆ ಎಂದು ಹಾವೇರಿ ಅಗ್ನಿಶಾಮಕ ದಳದ ಅಧಿಕಾರಿ ಬಿ ವೈ ತುರನೂರ ತಿಳಿಸಿದ್ದಾರೆ.

ಹಾವೇರಿಯಲ್ಲಿ ಬಣವೆಗಳಿಗೆ ಬೆಂಕಿ ಹತ್ತುವ ಪ್ರಕರಣಗಳೇ ಹೆಚ್ಚು..

ಹಾವೇರಿ ನಗರದ ಅಗ್ನಿಶಾಮಕ ದಳದ ಕಚೇರಿಯಲ್ಲಿ ಪ್ರಸ್ತುತ ವರ್ಷ 54 ಪ್ರಕರಣಗಳು ದಾಖಲಾಗಿವೆ. ರೈತರಿಗೆ ಸಂಬಂಧಿಸಿದ ಉತ್ಪನ್ನಗಳಲ್ಲಿಯೇ ಹೆಚ್ಚು ಬೆಂಕಿ ಹೊತ್ತಿರುವುದು ಇನ್ನೂ ಒಂದೇ ಒಂದು ಕಾರ್ಖಾನೆಯಲ್ಲಿ ಅಗ್ನಿಅವಘಡ ಪ್ರಕರಣ ನಡೆದಿದೆ. ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ:ಮೈಸೂರು ಜಿಲ್ಲೆಯಲ್ಲಿವೆ 11 ಅಗ್ನಿಶಾಮಕ ಠಾಣೆಗಳು

ಇನ್ನು, ಮನೆಗಳಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣಗಳು ಸಂಭವಿಸಿಲ್ಲ. ರೈತರು ತಮ್ಮ ಉತ್ಪನ್ನಗಳ ರಕ್ಷಣೆಗೆ ಮುಂಜಾಗ್ರತೆ ವಹಿಸಿದರೆ ಹೆಚ್ಚಿನ ಪ್ರಕರಣಗಳನ್ನು ತಡೆಯಬಹುದು ಎಂದು ತಿಳಿಸಿದರು.

ABOUT THE AUTHOR

...view details