ಹಾವೇರಿ: ಬೆಂಕಿ ತಗುಲಿ 450ಕ್ಕೂ ಅಧಿಕ ಕ್ವಿಂಟಲ್ ಮೆಕ್ಕೆಜೋಳದ ತೆನೆಗಳು ಹೊತ್ತಿ ಉರಿದ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಂಸಭಾವಿ ಗ್ರಾಮದ ಬಳಿ ನಡೆಯಿತು.
ಹಾವೇರಿ: ಹಾವು ಸೇರಿ 450 ಕ್ವಿಂಟಲ್ ಮೆಕ್ಕೆಜೋಳ ತೆನೆ ಸುಟ್ಟು ಭಸ್ಮ - ಹಾವೇರಿಯಲ್ಲಿ 450 ಕ್ವಿಂಟಾಲ್ ಮೆಕ್ಕೆಜೋಳ ತೆನೆ ಸುಟ್ಟು ಭಸ್ಮ
ಆಕಸ್ಮಿಕವಾಗಿ ಬೆಂಕಿ ತಗುಲಿ ಜಮೀನಿನಲ್ಲಿ ಗುಡ್ಡೆ ಹಾಕಿದ್ದ ಮೆಕ್ಕೆಜೋಳದ ತೆನೆಗಳು ಸುಟ್ಟು ಭಸ್ಮವಾಗಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ಆಕಸ್ಮಿಕ ಬೆಂಕಿ
ವಿರುಪಾಕ್ಷ ಕಲ್ಲತ್ತಿ ಎಂಬುವರಿಗೆ ಸೇರಿದ ಜಮೀನಿನಲ್ಲಿ ಗುಡ್ಡೆ ಹಾಕಿದ್ದ ಮೆಕ್ಕೆಜೋಳದ ತೆನೆಗಳು ಸುಟ್ಟು ಹೋಗಿವೆ. ಇಂದು ಬೆಳಗ್ಗಿನ ಜಾವ ಘಟನೆ ನಡೆದಿದೆ. ಮೆಕ್ಕೆಜೋಳದ ರಾಶಿಯಲ್ಲಿ ಬಿಡಾರ ಹೂಡಿದ್ದ ಹಾವು ಕೂಡಾ ಬಲಿಯಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಹಂಸಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.