ಹಾಸನ:ಯಾವುದೇ ಅನುಮತಿ ಪಡೆಯದೇ ಮಂಗಳೂರಿನಿಂದ ಸಕಲೇಶಪುರಕ್ಕೆ ಕಾರಿನಲ್ಲಿ ಬಂದ ಯುವತಿಯರನ್ನು ಪೊಲೀಸರು ತಡೆದಿದ್ದಾರೆ.
ಕಾರಿಗೆ ಅಗತ್ಯ ಸೇವೆ ಪಾಸ್ ಅಂಟಿಸಿಕೊಂಡು ಮಂಗಳೂರಿನಿಂದ ಶಿರಾಡಿ ಘಾಟ್ ಮೂಲಕ ಸಕಲೇಶಪುರಕ್ಕೆ ಬಂದ ಯುವತಿಯರನ್ನು ಪೊಲೀಸರು ಖುದ್ದು ಪರಿಶೀಲಿಸಿದಾಗ ಅವರ ಬಳಿ ಅನುಮತಿ ಪಾಸ್ ಇಲ್ಲದೇ ಇರುವುದು ಬೆಳಕಿಗೆ ಬಂದಿದೆ. ಇದೇ ವೇಳೆ ಅವರು ಸಕಲೇಶಪುರ ತಾಲೂಕಿನ ಆಚಂಗಿ ಗ್ರಾಮದವರೆಂದು ತಿಳಿಸಿದ್ದಾರೆ.
ಅನುಮತಿ ಇಲ್ಲದೇ ಬಂದವರನ್ನು ಪರಿಶೀಲಿಸಿದ ಪೊಲೀಸರು ಅನಂತರ ಯುವತಿಯರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿ 14 ದಿನ ಹೋಂ ಕ್ವಾರಂಟೈನ್ನಲ್ಲಿರಲು ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಯುವತಿಯರು ಬಂದಿದ್ದ ವಾಹನವನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಉಪ ವಿಭಾಗಧಿಕಾರಿ ಗಿರೀಶ್ ನಂದನ್, ತಹಶೀಲ್ದಾರ್ ಮಂಜುನಾಥ್, ಆರಕ್ಷಕ ವೃತ್ತ ನಿರೀಕ್ಷಕ ಗಿರೀಶ್,, ಸಬ್ ಇನ್ಸ್ಪೆಕ್ಟರ್ ರಾಘವೇಂದ್ರ ಮತ್ತು ಕಾರ್ಮಿಕ ಇಲಾಖೆಯ ಅಕ್ಬರ್ ಬಾಷಾ ಇನ್ನಿತರರು ಇದ್ದರು.