ಕರ್ನಾಟಕ

karnataka

ETV Bharat / state

ಶಶಿವಾಳ - ಕೆಂಗಲಪುರ ಅರಣ್ಯದಲ್ಲಿ ಕಾಳ್ಗಿಚ್ಚು; 800 ಎಕರೆಗೂ ಹರಡುವ ಭೀತಿ

ಅರಸೀಕೆರೆ ತಾಲೂಕಿನ ಶಶಿವಾಳ ಮತ್ತು ಕೆಂಗಲಪುರ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 800 ಎಕರೆ ಅರಣ್ಯ ಪ್ರದೇಶಕ್ಕೆ ಹರಡುವ ಸಾಧ್ಯತೆಯಿದೆ.

By

Published : Feb 11, 2021, 6:34 PM IST

shasivala-Kengalapura forest
ಶಶಿವಾಳ- ಕೆಂಗಲಪುರ ಅರಣ್ಯದಲ್ಲಿ ಬೆಂಕಿ

ಹಾಸನ: ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಸಾಕಷ್ಟು ಮರಗಳು ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದಿದೆ.

ಅರಸೀಕೆರೆ ತಾಲೂಕಿನ ಶಶಿವಾಳ ಮತ್ತು ಕೆಂಗಲಪುರ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ ಸುಮಾರು 800 ಎಕರೆ ಅರಣ್ಯ ಪ್ರದೇಶಕ್ಕೆ ಹರಡುವ ಸಾಧ್ಯತೆಯಿದೆ. ಈಗಾಗಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡ್ತಿದ್ದಾರೆ.

ಶಶಿವಾಳ- ಕೆಂಗಲಪುರ ಅರಣ್ಯದಲ್ಲಿ ಬೆಂಕಿ

ಇದನ್ನು ಓದಿ: ರೂಪಾಂತರಿ ಕೊರೊನಾ ವಿರುದ್ಧ ಹೋರಾಡಲು ಅಸ್ಟ್ರಾಜೆನೆಕಾ ಅಭಿವೃದ್ಧಿ: ಡಬ್ಲ್ಯುಎಚ್‌ಒ ನಿರ್ಧಾರ

ಹಾಸನ ಹಾಗೂ ತುಮಕೂರು ಗಡಿಭಾಗದ ಪ್ರದೇಶವಾಗಿರೋ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಕಾಡಿನಲ್ಲಿದ್ದ ಸಾವಿರಾರು ಸರಿಸೃಪಗಳೆಲ್ಲ ಅಗ್ನಿಗಾಹುತಿಯಾಗಿದ್ದು, ಬೆಂಕಿ ಮುಗಿಲೆತ್ತರಕ್ಕೆ ಕಾಣಿಸಿಕೊಂಡಿದೆ. ಜೊತೆಗೆ ಬಿಸಿಲಿನ ತಾಪಮಾನವೂ ಹೆಚ್ಚಾಗಿದ್ದರಿಂದ ಬೆಂಕಿಯ ಕೆನ್ನಾಲಗೆ ಹೆಚ್ಚಾಗಿ ಹರಡಲು ಕಾರಣ ಎನ್ನಬಹುದು.

ABOUT THE AUTHOR

...view details