ಕರ್ನಾಟಕ

karnataka

By

Published : Sep 27, 2020, 3:16 PM IST

ETV Bharat / state

ಕರ್ನಾಟಕ ಬಂದ್ ಬೆಂಬಲಿಸುವಂತೆ ಹಾಸನದಲ್ಲಿ ವಾಟಾಳ್ ನಾಗರಾಜ್ ಸಾಂಕೇತಿಕ ಪ್ರತಿಭಟನೆ

ಶಾಲಾ-ಕಾಲೇಜು ಅಂಗಡಿ-ಮುಂಗಟ್ಟು ಹೋಟೆಲ್ ಸೇರಿ ಮಾರುಕಟ್ಟೆಗಳು ಬಂದಾಗಲಿವೆ. ಸಾರ್ವಜನಿಕರು ರೈತ ವಿರೋಧಿ ಕಾಯ್ದೆಗಳನ್ನು ತಂದಿರುವ ಸರ್ಕಾರದ ವಿರುದ್ಧ ನಾಳೆ ನಡೆಯುವ ಕರ್ನಾಟಕ ಬಂದ್ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಮನವಿ..

protest
ಸಾಂಕೇತಿಕ ಪ್ರತಿಭಟನೆ

ಹಾಸನ : ನಾಳೆ ರಾಜ್ಯಾದ್ಯಂತ ಕರೆಕೊಟ್ಟಿರುವ ಕರ್ನಾಟಕ ಬಂದ್ ಬೆಂಬಲಿಸಿ ಎಂದು ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಅವರು ನಗರದ ಎನ್ ಆರ್ ವೃತ್ತದಲ್ಲಿ ಸಾಂಕೇತಿಕ ಪ್ರತಿಭಟನೆ ಮಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿರುವ ಹಿನ್ನೆಲೆ ಇವುಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಸಾಂಕೇತಿಕ ಪ್ರತಿಭಟನೆ ಮಾಡಿದರು.

ಹಾಸನದಲ್ಲಿ ವಾಟಾಳ್ ನಾಗರಾಜ್ ಸಾಂಕೇತಿಕ ಪ್ರತಿಭಟನೆ

ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್ ಅವರು, ನಾಳೆ ರಾಜ್ಯಾದ್ಯಂತ ಶಾಲಾ-ಕಾಲೇಜು ಅಂಗಡಿ-ಮುಂಗಟ್ಟು ಹೋಟೆಲ್ ಸೇರಿ ಮಾರುಕಟ್ಟೆಗಳು ಬಂದಾಗಲಿವೆ. ಸಾರ್ವಜನಿಕರು ರೈತ ವಿರೋಧಿ ಕಾಯ್ದೆಗಳನ್ನು ತಂದಿರುವ ಸರ್ಕಾರದ ವಿರುದ್ಧ ನಾಳೆ ನಡೆಯುವ ಕರ್ನಾಟಕ ಬಂದ್ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ABOUT THE AUTHOR

...view details