ಕರ್ನಾಟಕ

karnataka

ಕೊನೆಗೂ ಪತ್ತೆಯಾದ ಕೊಚ್ಚಿ ಹೋಗಿದ್ದ ವಿದ್ಯಾರ್ಥಿಗಳ ಶವ, ಪೋಷಕರ ಆಕ್ರಂದನ

By

Published : Jan 17, 2020, 11:18 PM IST

ಸಕಲೇಶಪುರದ ಬಳಿ ಸ್ನಾನಕ್ಕೆಂದು ಹೇಮಾವತಿ ನದಿಗೆ ಇಳಿದ ವೇಳೆ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳ ಶವವನ್ನು ಹೊರತೆಗೆಯಲಾಗಿದೆ.

deadbody
ಪತ್ತೆಯಾದ ಯುವಕರ ಶವ

ಸಕಲೇಶಪುರ/ಹಾಸನ:ಸ್ನಾನಕ್ಕೆಂದು ಹೇಮಾವತಿ ನದಿಗೆ ಇಳಿದ ವೇಳೆ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳ ಶವವನ್ನು ಹೊರತೆಗೆಯಲಾಗಿದೆ.

ಪಟ್ಟಣದ ಹೊರವಲಯದಲ್ಲಿರುವ ಹೇಮಾವತಿ ನದಿಯಲ್ಲಿ ಮಕರ ಸಂಕ್ರಾಂತಿಯಂದು ಸ್ನಾನಮಾಡಲು ಹೋಗಿದ್ದ ದಯಾನಂದ್(17) ಮತ್ತು ಪ್ರಸಾದ್(17)ಎಂಬ ಕಾಲೇಜು ವಿದ್ಯಾರ್ಥಿಗಳು ಮೃತಪಟ್ಟಿದ್ದರು.ಇಂದು ಯುವಕರ ಶವವನ್ನ ನದಿಯಿಂದ ಹೊರತೆಗೆಯುವಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಪತ್ತೆಯಾದ ಯುವಕರ ಶವ

ಬುಧವಾರ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಗಳನ್ನು ಬೋಟ್ ಮುಖಾಂತರ ಹುಡುಕಿದರೂ ಸಹ ಯಾವುದೆ ಪ್ರಯೋಜನವಾಗದಿದ್ದರಿಂದ ರಾತ್ರಿಯ ವೇಳೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಿಬ್ಬಂದಿ ಮತ್ತು ಮುಳುಗು ತಜ್ಞರನ್ನು ಕರೆಸಲಾಗಿತ್ತು.

ಗುರುವಾರ ಮಧ್ಯಾಹ್ನದ ವೇಳೆಗೆ ದಮಾನಂದ್ ಮೃತದೇಹವನ್ನು ಹೊರತೆಗೆದ್ರೆ, ಇಂದು ಮತ್ತೆ ಪ್ರಸಾದ್ ಮೃತದೇಹವನ್ನು 72 ಗಂಟೆಗಳ ಕಾರ್ಯಾಚರಣೆ ಮೂಲಕ ಶವವನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಸಂಬಂಧ ಸಕಲೇಶಪುರ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details