ಕರ್ನಾಟಕ

karnataka

ETV Bharat / state

ಗ್ರಾನೈಟ್ ಉದ್ಯಮಿ ರಘು ಮನೆ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಬಂಧನ - ಆರೋಪಿ ಮಹಮ್ಮದ್​ ಖಾಲಿದ್​

ಹಾಸನ ನಗರದ ವಿಶ್ವೇಶ್ವರಯ್ಯ ಬಡಾವಣೆಯ ಗ್ರಾನೈಟ್ ಉದ್ಯಮಿ ರಘು( Granite businessman Raghu) ಎಂಬುವರ ಮನೆಯಲ್ಲಿ ಎರಡು ಕೋಟಿ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಮೂಲದ ಮಹಮದ್ ಖಾಲಿದ್ ಹಾಗೂ ಮತ್ತೊಬ್ಬ ಆರೋಪಿ ಸೈಯದ್​ನನ್ನು ಬಂಧಿಸಲಾಗಿತ್ತು..

S P Srinivasa Gowda
ಎಸ್​ಪಿ ಶ್ರೀನಿವಾಸಗೌಡ

By

Published : Nov 12, 2021, 10:03 PM IST

ಹಾಸನ :ನಗರದಲ್ಲಿ ಸೆ.7ರಂದು ನಡೆದಿದ್ದ ಎರಡು ಕೋಟಿ ಮೌಲ್ಯದ ಚಿನ್ನಾಭರಣ ಕಳವು (2 crore value gold theft) ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ 45 ಲಕ್ಷ ರೂ. ಬೆಲೆಯ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಹಳೇಬೀಡು ಪೊಲೀಸರು ಯಶಸ್ವಿಯಾಗಿದ್ದಾರೆ.

ಚಿನ್ನಾಭರಣ ಕಳವು ಪ್ರಕರಣದ ಬಗ್ಗೆ ಎಸ್ ​ಪಿ ಶ್ರೀನಿವಾಸಗೌಡ ಮಾಹಿತಿ ನೀಡಿರುವುದು..

ನಗರದ ವಿಶ್ವೇಶ್ವರಯ್ಯ ಬಡಾವಣೆಯ ಗ್ರಾನೈಟ್ ಉದ್ಯಮಿ ರಘು (Granite businessman Raghu) ಎಂಬುವರ ಮನೆಯಲ್ಲಿ ಎರಡು ಕೋಟಿ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಮೂಲದ ಮಹಮದ್ ಖಾಲಿದ್ (Mohammed Khalid) ಹಾಗೂ ಮತ್ತೊಬ್ಬ ಆರೋಪಿ ಸೈಯದ್ (Syed) ​ನನ್ನು ಬಂಧಿಸಲಾಗಿತ್ತು.

ಈ ಬಗ್ಗೆ ಎಸ್​ಪಿ ಶ್ರೀನಿವಾಸಗೌಡ ಅವರು ಮಾತನಾಡಿದ್ದು, 'ಹಳೇಬೀಡು ಠಾಣೆ ವೃತ್ತ ನಿರೀಕ್ಷಕ ಶ್ರೀಕಾಂತ್ ಅವರು ಮಾಯಗೊಂಡನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ನ.12 ರಂದು ಬೆಳಗ್ಗೆ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಜಾವ್‌ಗಲ್ ಕಡೆಯಿಂದ ಬಂದ ಕೇರಳ ಮೂಲದ ನೋಂದಣಿ ಇದ್ದ ಎರಡು ಕಾರನ್ನು ತಡೆದು ದಾಖಲೆ ತೋರಿಸುವಂತೆ ತಿಳಿಸಿದ್ದಾರೆ.

ಆಗ ಅನುಮಾನಾಸ್ಪದವಾಗಿ ವರ್ತಿಸಿದ ಕಡೂರು ಹಾಗೂ ಮಂಗಳೂರು ಮೂಲದ ಇಬ್ಬರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ವಶಪಡಿಸಿಕೊಂಡ ಕಾರನ್ನು ಪರಿಶೀಲಿಸಿದಾಗ ಕಪ್ಪುಬಣ್ಣದ ಪರ್ಸ್‌ನಲ್ಲಿ ಚಿನ್ನದಗಟ್ಟಿ, ಮೂರು ಚಿನ್ನದ ಚೈನ್, ಮತ್ತೊಂದು ಕಾರಿನಲ್ಲಿ 500 ಬೆಲೆಯ ಎರಡು ಕಂತೆ ನೋಟ್ ಪತ್ತೆಯಾಗಿದೆ' ಎಂದರು.

ಆರೋಪಿಗಳು ಸೆ.7ರಂದು ವಿಶ್ವೇಶ್ವರಯ್ಯ ಬಡಾವಣೆಯ 80 ಅಡಿ ರಸ್ತೆಯ ರಘು ಎಂಬುವರ ಮನೆಯಲ್ಲಿ ಸಂಜೆ ವೇಳೆ ಎರಡು ವಾಹನಗಳು ಒಂದರ ಬಳಿಕ ಮತ್ತೊಂದು ಹೋಗಿದ್ದನ್ನು ಗಮನಿಸಿದ್ದಾರೆ. ಆ ಬಳಿಕ 15ರಿಂದ 20 ನಿಮಿಷದ ಅಂತರದಲ್ಲಿ ಎರಡು ಕೋಟಿಯಷ್ಟು ಚಿನ್ನಾಭರಣ ಕಳವು ಮಾಡಿಕೊಂಡು ಪರಾರಿಯಾಗಿದ್ದರು.

ಪ್ರಕರಣ ಬೇಧಿಸಲು 7 ರಿಂದ 8 ತಂಡವನ್ನು ರಚಿಸಲಾಗಿತ್ತು. ಹಳೇಬೀಡು ಸಿಪಿಐ ಶ್ರೀಕಾಂತ್ ಮತ್ತು ಎಸ್‌ಐ ಗಿರಿಧರ್ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಸಿಸಿ ಕ್ಯಾಮೆರಾ ಮನೆಯಲ್ಲಿ ಇಲ್ಲವಾದ ಕಾರಣ ಹಾಗೂ ಯಾವುದೇ ಸುಳಿವು ದೊರೆಯದೆ ಪ್ರಕರಣ ಸವಾಲಾಗಿ ಪರಿಣಮಿಸಿತ್ತು.

ಪ್ರಕರಣವನ್ನು ಬೇಧಿಸಿ ಇಬ್ಬರಿಂದ 727 ಗ್ರಾಂ ತೂಕದ ಚಿನ್ನಾಭರಣ, 4 ಕೆಜಿ 800ಗ್ರಾಂ ಬೆಳ್ಳಿ ಆಭರಣ, ಎರಡು ಲಕ್ಷ ರೂ. ಕೃತ್ಯಕ್ಕೆ ಉಪಯೋಗಿಸಿದ್ದ ಎರಡು ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದಲ್ಲಿ ಇನ್ನಿಬ್ಬರು ಭಾಗಿಯಾಗಿದ್ದರು ಎಂಬ ಮಾಹಿತಿ ದೊರಕಿದೆ.

ಓದಿ:ಬಿಟ್ ಕಾಯಿನ್ ಪ್ರಕರಣದ ಕಾಂಗ್ರೆಸ್ ದಾಖಲೆ ಬಿಡುಗಡೆ ಫ್ಲಾಪ್ ಶೋ ಆಗಲಿದೆ : ಸಚಿವ ಅಶ್ವತ್ಥ್ ನಾರಾಯಣ

ABOUT THE AUTHOR

...view details