ಕರ್ನಾಟಕ

karnataka

ETV Bharat / state

ಬೋಟ್ ಪಲ್ಟಿಯಾದಾಗ ಸಾವು ಕಣ್ಣೆದುರೇ ಬಂದಂತಾಗಿತ್ತು: ಸಿವಿಲ್ ಡಿಫೆನ್ಸ್ ಕಮಾಂಡರ್ ಚೇತನ್ - Chetan

ಕರ್ನಾಟಕ ಸಿವಿಲ್ ಡಿಫೆನ್ಸ್​ ಕಮಾಂಡರ್​​ಗೆ ಸನ್ಮಾನ. ವಿರುಪಾಪುರ ಗುಡ್ಡದಲ್ಲೊಮ್ಮೆ ಜನರನ್ನು ರಕ್ಷಿಸಲು ಬೋಟಿನಲ್ಲಿ ತೆರಳುತ್ತಿದ್ದಾಗ ಅದು ಪಲ್ಟಿಯಾಗಿದ್ದರಿಂದ ಒಂದು ಕ್ಷಣ ನನ್ನ ಕಣ್ಣೆದುರೇ ಸಾವು ಬಂದು ಹೋದಂತಾಯಿತು ಎಂದು ಚೇತನ್ ಅನುಭವ ಹಂಚಿಕೊಂಡರು.

ಕರ್ನಾಟಕದ ಸಿವಿಲ್ ಡಿಫೆನ್ಸ್ ಕಮಾಂಡರ್ ಚೇತನ್​ಗೆ ಸನ್ಮಾನ

By

Published : Aug 29, 2019, 7:00 AM IST

ಹಾಸನ: ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ನೆರೆ ಹಾವಳಿ, ಬೆಂಕಿ ಅವಘಡ ಸೇರಿದಂತೆ ಇನ್ನಿತರೆ ತುರ್ತು ಸಂದರ್ಭಗಳಲ್ಲಿ ಸಾವಿರಾರು ಜನರನ್ನು ರಕ್ಷಿಸಿರುವ ಕರ್ನಾಟಕದ ಸಿವಿಲ್ ಡಿಫೆನ್ಸ್ ಕಮಾಂಡರ್ ಡಾ. ಪಿ. ಆರ್. ಎಸ್. ಚೇತನ್‌ ಅವರನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಚೇತನ್​, ತಾವು ಸುಮಾರು 2 ದಶಕಗಳಿಗೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಕೊಡಗು, ಉತ್ತರ ಕರ್ನಾಟಕ, ಮಂಗಳೂರು, ಚೆನ್ನೈ ಸೇರಿದಂತೆ ಇನ್ನಿತರ ಹೊರ ರಾಜ್ಯಗಳಲ್ಲಿಯೂ ಕೂಡ ತುರ್ತು ಸಂದರ್ಭದಲ್ಲಿ ನಮ್ಮ ಬೆಟಾಲಿಯನ್ ವತಿಯಿಂದ ಸಾವಿರಾರು ಜನರು, ಜಾನುವಾರುಗಳನ್ನು ರಕ್ಷಣೆ ಮಾಡಿದ್ದೇವೆ ಎಂದರು.

ಕರ್ನಾಟಕದ ಸಿವಿಲ್ ಡಿಫೆನ್ಸ್ ಕಮಾಂಡರ್ ಚೇತನ್​ಗೆ ಸನ್ಮಾನ

ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ನಡೆದ ಭಾರೀ ಜಲ ಪ್ರಳಯದಲ್ಲಿ ನಮ್ಮ ತಂಡ ನರಗುಂದ, ರೋಣ ಹಾಗೂ ವಿರುಪಾಪುರ ಗುಡ್ಡದಲ್ಲಿ ಸಿಲುಕಿಕೊಂಡಿದ್ದ ಸಾವಿರಾರು ಜನರನ್ನು ರಕ್ಷಣೆ ಮಾಡಿದೆ. ವಿರುಪಾಪುರ ಗುಡ್ಡದಲ್ಲೊಮ್ಮೆ ಜನರನ್ನು ರಕ್ಷಿಸಲು ಬೋಟಿನಲ್ಲಿ ತೆರಳುತ್ತಿದ್ದಾಗ ಅದು ಪಲ್ಟಿಯಾಗಿದ್ದರಿಂದ ಒಂದು ಕ್ಷಣ ನನ್ನ ಕಣ್ಣೆದುರೇ ಸಾವು ಬಂದು ಹೋದಂತಾಯಿತು ಎಂದು ಅನುಭವ ಹಂಚಿಕೊಂಡರು.

ಜೀವನದಲ್ಲಿ ಬರುವ ಕಷ್ಟಗಳನ್ನು ಧೈರ್ಯವಾಗಿ ಎದುರಿಸುವ ಮೂಲಕ ತಮ್ಮ ಜೀವನವನ್ನು ಸುಂದರವಾಗಿಸಿ ಕೊಳ್ಳಬೇಕು ಎಂದು ಯುವ ಪೀಳಿಗೆಗೆ ಸಲಹೆ ನೀಡಿದರು.

ABOUT THE AUTHOR

...view details