ಕರ್ನಾಟಕ

karnataka

ETV Bharat / state

ಜಾನುವಾರುಗಳ ಮೂಳೆ, ಕೊಂಬುಗಳ ಸಾಗಣೆ... ಅರಸೀಕೆರೆಯಲ್ಲಿ ಲಾರಿ ಚಾಲಕ ಅರೆಸ್ಟ್​ - ಹಾಸನ ಸುದ್ದಿ

ಹಾಸನ ಜಿಲ್ಲೆಯ ಅರಸೀಕೆರೆ ನಗರಸಭೆ ಗಡಿಭಾಗಕ್ಕೆ ಹೊಂದಿಕೊಂಡಂತಿರುವ ಅಗ್ಗುಂದ ಗ್ರಾಮ ಪಂಚಾಯತ್​ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಜಾನುವಾರುಗಳ ಮೂಳೆ ಹಾಗೂ ಕೊಂಬುಗಳನ್ನ ಸಾಗಿಸುತ್ತಿದ್ದ ಲಾರಿ ಚಾಲಕನನ್ನ ಪೊಲೀಸರು ಬಂಧಿಸಿದ್ದಾರೆ.

Transport of bone, horns of cattle, arrest of a lorry driver
ಜಾನುವಾರುಗಳ ಮೂಳೆ,ಕೊಂಬುಗಳ ಸಾಗಾಟ..ಓರ್ವ ಲಾರಿ ಚಾಲಕನ ಬಂಧನ

By

Published : Apr 27, 2020, 10:16 AM IST

ಹಾಸನ:ಸರ್ಕಾರಿ ಜಾಗದಲ್ಲಿ ಅಕ್ರವಾಗಿ ಶೆಡ್ ನಿರ್ಮಿಸಿ, ಜಾನುವಾರುಗಳ ಮೂಳೆ ಹಾಗೂ ಕೊಂಬುಗಳನ್ನ ಸಾಗಿಸುತ್ತಿದ್ದ ಲಾರಿ ಓರ್ವ ಚಾಲಕನನ್ನ ಪೊಲೀಸರು ಬಂಧಿಸಿದ್ದಾರೆ.

ಜಾನುವಾರುಗಳ ಮೂಳೆ, ಕೊಂಬುಗಳ ಸಾಗಣೆ, ಲಾರಿ ಚಾಲಕನ ಬಂಧನ

ಅರಸೀಕೆರೆ ನಗರಸಭೆ ಗಡಿಭಾಗಕ್ಕೆ ಹೊಂದಿಕೊಂಡಂತಿರುವ ಅಗ್ಗುಂದ ಗ್ರಾಮ ಪಂಚಾಯತ್​ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿ, ಟನ್​ಗಟ್ಟಲೇ ಜಾನುವಾರುಗಳ ಮೂಳೆ ಮತ್ತು ಕೊಂಬನ್ನ ಶೇಖರಣೆ ಮಾಡಿ ಇಡಲಾಗಿತ್ತು. ಅದನ್ನ ಮಂಡ್ಯ ಮೂಲದ ವಾಹನದ ಮೂಲಕ ಬೇರೆಡೆಗೆ ಸಾಗಿಸಲು ಮುಂದಾಗಿದ್ರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಸಾವಿರಾರು ರೂಪಾಯಿ ಮೌಲ್ಯದ ಜಾನುವಾರುಗಳ ಮೂಳೆ ಹಾಗೂ ಕೊಂಬುಗಳನ್ನ ವಶಕ್ಕೆ ಪಡೆದು, ವಾಹನ ಚಾಲಕನನ್ನ ಬಂಧಿಸಿದ್ದಾರೆ.

ಕಳೆದ 10 ವರ್ಷಗಳಿಂದ ಈ ದಂಧೆ ನಡೆಯುತ್ತಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ಗೂಡ್ಸ್ ವಾಹನದ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ABOUT THE AUTHOR

...view details