ಹಾಸನ:ಪುರಸಭೆಗೆ ಬರುವ ಸಾರ್ವಜನಿಕರನ್ನ ಪುರಸಭೆ ಅಧಿಕಾರಿಯೋರ್ವ ಏಕವಚನದಲ್ಲಿ ಸಂಬೋಧಿಸಿ ಅವರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅಧಿಕಾರಿ ವಿರುದ್ಧ ದೂರು ಸಲ್ಲಿಸಿದ್ದಾರೆ.
ಪುರಸಭೆ ಅಧಿಕಾರಿ ಸಾರ್ವಜನಿಕರನ್ನ ಏಕವಚನದಲ್ಲಿ ಸಂಬೋಧಿಸುತ್ತಾರೆ: ಕರವೇ ದೂರು - ಲೆಟೆಸ್ಟ್ ಹಾಸನ ನ್ಯೂಸ್
ಪುರಸಭೆಗೆ ಬರುವ ಸಾರ್ವಜನಿಕರನ್ನ ಪುರಸಭೆ ಅಧಿಕಾರಿಯೋರ್ವ ಏಕವಚನದಲ್ಲಿ ಸಂಬೋಧಿಸಿ ಅವರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅಧಿಕಾರಿ ವಿರುದ್ಧ ದೂರು ಸಲ್ಲಿಸಿದ್ದಾರೆ.
ಪುರಸಭೆ ಅಧಿಕಾರಿಯೋರ್ವ ಸಾರ್ವಜನಿಕರನ್ನ ಏಕವಚನದಲ್ಲಿ ಸಂಬೋದಿಸುತ್ತಾರೆ : ಕರವೇ ದೂರು
ಜಿಲ್ಲೆಯ ಸಕಲೇಶಪುರ ಪುರಸಭಾದ ನೀಲಕಂಠ ಎಂಬ ಅಧಿಕಾರಿ ಕಚೇರಿಯ ಕೆಲಸಕ್ಕೆ ಬರುವ ಜನರನ್ನ ಏಕವಚನದಲ್ಲಿ ಮಾತನಾಡಿ ದಬ್ಬಾಳಿಕೆ ಮಾಡುತ್ತಾರೆ. ಅಲ್ಲದೇ ಬೀದಿ ಬದಿ ವ್ಯಾಪಾರಸ್ಥರೊಂದಿಗೆ ಕೂಡಾ ಉಢಾಪೆಯಿಂದ ವರ್ತನೆ ಮಾಡುತ್ತಾರೆ ಎಂದು ಆರೋಪಿಸಿದ್ರು. ಇನ್ನು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿ ಸ್ಟೀಫನ್ ಪ್ರಕಾಶ್ ಅವರಿಗೆ ಮನವಿ ಸಲ್ಲಿಸಿ, ಆತನ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಯ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ರು.