ಕರ್ನಾಟಕ

karnataka

ETV Bharat / state

ಸಂಸದ ಪ್ರಜ್ವಲ್ ರೇವಣ್ಣಗೆ ಸಂಕಷ್ಟ: ಆಸ್ತಿ ವಿವರ ತನಿಖೆಗೆ ಸುಪ್ರೀಂಕೋರ್ಟ್ ಸೂಚನೆ

ಸಂಸದ ಪ್ರಜ್ವಲ್ ರೇವಣ್ಣ 23ನೇ ವಯಸ್ಸಿನಲ್ಲಿಯೇ 23 ಕೋಟಿ ಆಸ್ತಿಯನ್ನು ಹೇಗೆ ಸಂಪಾದಿಸಿದರು ಎಂದು ಪ್ರಶ್ನಿಸಿ ವಕೀಲ ದೇವರಾಜೇಗೌಡ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಈ ದೂರು ದಾಖಲಾಗಿ ಮೂರು ವರ್ಷದ ನಂತರ ಈಗ ಆಸ್ತಿ ವಿವರದ ತನಿಖೆಯಾಗಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

By

Published : Feb 15, 2022, 1:16 PM IST

MP Prajwal Revanna
ಸಂಸದ ಪ್ರಜ್ವಲ್ ರೇವಣ್ಣ

ಹಾಸನ:ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಮೊಮ್ಮಗ, ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಕಷ್ಟ ಎದುರಾಗಿದೆ. ಲೋಕಸಭಾ ಚುನಾವಣೆಯಲ್ಲಿ ತಪ್ಪು ಆಸ್ತಿ ವಿವರ ದಾಖಲೆ ನೀಡಿದ ಆರೋಪದಡಿ ತನಿಖೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.

ವಕೀಲ ದೇವರಾಜೇಗೌಡ (ದೂರುದಾರ)

ಪ್ರಜ್ವಲ್ ರೇವಣ್ಣ 23ನೇ ವಯಸ್ಸಿನಲ್ಲಿಯೇ 23 ಕೋಟಿ ಆಸ್ತಿಯನ್ನು ಹೇಗೆ ಸಂಪಾದಿಸಿದರು ಎಂದು ಪ್ರಶ್ನಿಸಿ ವಕೀಲ ದೇವರಾಜೇಗೌಡ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ ಪ್ರಜ್ವಲ್ ರೇವಣ್ಣ ವಿರುದ್ದ ಬೇನಾಮಿ ಆಸ್ತಿ ಮತ್ತು ಗೋಮಾಳ ಕಬಳಿಕೆ ಆರೋಪ ಮಾಡಿದ್ದರು. ಈ ದೂರು ದಾಖಲಾಗಿ ಮೂರು ವರ್ಷದ ನಂತರ ಈಗ ಆಸ್ತಿ ವಿವರದ ತನಿಖೆಯಾಗಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ಈ ಕುರಿತ ತನಿಖೆ ನಡೆಸಲು ನ್ಯಾಯಮೂರ್ತಿಗಳಾದ ಸಂಜಯ್ ಕಿಷನ್ ಕೌಲ್ ಹಾಗೂ ನ್ಯಾಯಮೂರ್ತಿ ಸುಂದರೇಶ್ ದ್ವಿಸದಸ್ಯ ಪೀಠ ಆದೇಶ ಹೊರಡಿಸಿದೆ. ಚುನಾವಣಾ ಆಯೋಗಕ್ಕೂ ತಪ್ಪು ಮಾಹಿತಿ ನೀಡಿರುವ ಆರೋಪವಿದೆ. ಹೀಗಾಗಿ ಐಟಿ ತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿದೆ.

ಇದನ್ನೂ ಓದಿ:ಬಹುಕೋಟಿ ಮೇವು ಹಗರಣ : ಲಾಲು ದೋಷಿ ಎಂದು ಸಿಬಿಐ ಕೋರ್ಟ್ ತೀರ್ಪು​

ABOUT THE AUTHOR

...view details