ಕರ್ನಾಟಕ

karnataka

ETV Bharat / state

ಸಂಬಳ ನೀಡುತ್ತಿಲ್ಲವೆಂದು ಕಣ್ಣಾಸ್ಪತ್ರೆ ವಿರುದ್ಧ ಸಿಬ್ಬಂದಿ ಪ್ರತಿಭಟನೆ - undefined

ಹಾಸನದಲ್ಲಿ ಕಣ್ಣಿನ ಆಸ್ಪತ್ರೆಯೊಂದು ಸಿಬ್ಬಂದಿಗೆ, ಕಳೆದ ಆರು ತಿಂಗಳಿಂದ ವೇತನ ನೀಡಿಲ್ಲ ಎಂಬ ಕಾರಣಕ್ಕೆ ನಗರದ ಸಂಪಿಗೆ ರಸ್ತೆಯಲ್ಲಿರುವ ತಮ್ಮ ಸಂಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಿದ್ರು.

ಹಾಸನ ವಾಸನ್ ಐ ಕೇರ್​

By

Published : Jun 12, 2019, 6:35 AM IST

ಹಾಸನ: ಕಳೆದ ಆರು ತಿಂಗಳಿಂದ ವೇತನ ನೀಡಿಲ್ಲ ಎಂಬ ಕಾರಣಕ್ಕೆ ನಗರದ ಸಂಪಿಗೆ ರಸ್ತೆಯಲ್ಲಿರುವ ಕಣ್ಣಿನ ಖಾಸಗಿ ಆಸ್ಪತ್ರೆ ಸಿಬ್ಬಂದಿ ಇಂದು ಪ್ರತಿಭಟನೆ ನಡೆಸಿದರು.

ಐ ಕೇರ್ ಸಿಬ್ಬಂದಿಗೆ ಕಳೆದ ಐದಾರು ತಿಂಗಳಿಂದ ಸಂಬಳ ನೀಡಿಲ್ಲ. ಮಾಲೀಕರನ್ನು ಕೇಳಿದರೆ ನಮ್ಮ ಕಂಪನಿ ನಷ್ಟದಲ್ಲಿ ನಡೆಯುತ್ತಿದೆ. ಇಂದು-ನಾಳೆ ಎಂಬ ಸಬೂಬು ಹೇಳಿಕೊಂಡು ಕಳೆದ ಆರು ತಿಂಗಳಿಂದ ನಮಗೆ ಸಂಬಳ ನೀಡದೆ ಸತಾಯಿಸುತ್ತಿದ್ದಾರೆ ಅಂತ ಎಂದು ಸಿಬ್ಬಂದಿ ಆರೋಪ ಮಾಡಿದರು.

ವಾಸನ್ ಐ ಕೇರ್ ವಿರುದ್ಧ ಸಿಬ್ಬಂದಿ ಪ್ರತಿಭಟನೆ

ಹಾಸನ ನಗರದಲ್ಲಿ ಉತ್ತಮವಾಗಿ ಕಂಪನಿ ಲಾಭ ಗಳಿಸುತ್ತಿದ್ದರು ಕೂಡ ನಷ್ಟ ಇದೆ ಎಂಬ ಸಬೂಬನ್ನು ಹೇಳಿ ಸುಮಾರು 20 ಮಂದಿ ಸಿಬ್ಬಂದಿಗಳಿಗೆ 20 ಲಕ್ಷಕ್ಕೂ ಅಧಿಕ ಸಂಬಳ ನೀಡಬೇಕು ಅಂತ ಸಿಬ್ಬಂದಿವರ್ಗದವರು ಆರೋಪಿಸಿದರು. ಇನ್ನು ಐ ಕೇರ್​ನ ಮಾಲೀಕರು ಸಮಸ್ಯೆಯನ್ನು ಆಲಿಸಲು ಖುದ್ದು ನಾನೇ ಹಾಸನಕ್ಕೆ ಬರುತ್ತೇನೆ ಅಂತ ಭರವಸೆ ನೀಡಿದ ಬಳಿಕ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು.

For All Latest Updates

TAGGED:

ABOUT THE AUTHOR

...view details