ಹಾಸನ: ರಾಜಸ್ಥಾನದ ಅಲ್ವರ್ ಎಂಬಲ್ಲಿ ಗಡಿ ಕಾಯುತ್ತಿದ್ದ ಜಿಲ್ಲೆಯ ಅರಸೀಕೆರೆ ಮೂಲದ ಯೋಧ ಶಿವರಾಜ್ (37) ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆ ನಿನ್ನೆ ಹುಟ್ಟೂರಲ್ಲಿ ನೆರವೇರಿತು.
ಅರಸೀಕೆರೆ ತಾಲೂಕಿನ ಹಾರನಹಳ್ಳಿ ಸಮೀಪದ ಗುತ್ತಿನಕೆರೆಯ ಶಿವರಾಜ್ ರಾಜಸ್ಥಾನದ ಅಲ್ವರ್ ಎಂಬಲ್ಲಿ ಗಡಿ ಕಾಯುತ್ತಿದ್ದರು. 10 ದಿನಗಳಿಂದ ಎದೆ ನೋವಿನಿಂದ ಬಳಲುತ್ತಿದ್ದ ಅವರನ್ನು ದೆಹಲಿಯ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಹೆಚ್ಚಿನ ಉಸಿರಾಟದ ತೊಂದರೆಯಿಂದ ಸೋಮವಾರದಂದು ಮೃತಪಟ್ಟಿದ್ದಾರೆ. ನಿನ್ನೆ ಮೃತದೇಹವನ್ನು ಅರಸೀಕೆರೆಗೆ ಕರೆತರಲಾಯ್ತು.