ಹಾಸನ:ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಉಚಿತ ಲ್ಯಾಪ್ ಟಾಪ್ ಹಂಚಿಕೆ ವೇಳೆ ಸಾಮಾಜಿಕ ಅಂತರ ಮರೆತು ವಿದ್ಯಾರ್ಥಿಗಳು ಮುನ್ನುಗ್ಗಿದ ಘಟನೆ ನಡೆಯಿತು.
ಹಾಸನದಲ್ಲಿ ಉಚಿತ ಲ್ಯಾಪ್ ಟಾಪ್ ವಿತರಣೆ ವೇಳೆ ನೂಕು ನುಗ್ಗಲು - ಹಾಸನದಲ್ಲಿ ಲ್ಯಾಪ್ ಟಾಪ್ ವಿತರಣೆ ವೇಳೆ ನೂಕು ನುಗ್ಗಲು
ಸರ್ಕಾರದಿಂದ ನೀಡಲಾಗುವ ಉಚಿತ ಲ್ಯಾಪ್ಟಾಪ್ ಪಡೆಯಲು ಬಂದ ವಿದ್ಯಾರ್ಥಿಗಳು ನಾ ಮುಂದು ತಾ ಮುಂದು ಎಂದು ನುಗ್ಗಿದ ಪರಿಣಾಮ, ನೂಕು ನುಗ್ಗಲು ಉಂಟಾಯಿತು.
![ಹಾಸನದಲ್ಲಿ ಉಚಿತ ಲ್ಯಾಪ್ ಟಾಪ್ ವಿತರಣೆ ವೇಳೆ ನೂಕು ನುಗ್ಗಲು Social Distance violated in Hassna while distributing laptop](https://etvbharatimages.akamaized.net/etvbharat/prod-images/768-512-8578410-96-8578410-1598526679075.jpg)
ಲ್ಯಾಪ್ ಟಾಪ್ ವಿತರಣೆ ವೇಳೆ ನೂಕು ನುಗ್ಗಲು
ಲ್ಯಾಪ್ ಟಾಪ್ ವಿತರಕರು ಸರಿಯಾದ ವ್ಯವಸ್ಥೆ ಮಾಡದಿರುವುದೇ ನೂಕು ನುಗ್ಗಲಿಗೆ ಕಾರಣವಾಗಿತ್ತು. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದೆ ಲ್ಯಾಪ್ ಟಾಪ್ ವಿತರಿಸದಂತೆ ಸೂಚಿಸಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದರು.
ಸರ್ಕಾರ ಮುಂದಿನ ತಿಂಗಳಿನಿಂದ ಪದವಿ ಕಾಲೇಜುಗಳ ತರಗತಿ ಆರಂಭಿಸಲು ಯೋಚಿಸಿದೆ. ಆದರೆ, ಲ್ಯಾಪ್ ಟಾಪ್ ವಿತರಣೆಯಂತಹ ಸಣ್ಣ ಕಾರ್ಯಕ್ರಮದಲ್ಲೇ ಈ ರೀತಿ ಬೇಜವ್ದಾರಿತನ ತೋರಿಸಿದರೆ, ಇನ್ನು ತರಗತಿಗಳು ಪ್ರಾರಂಭವಾದರೆ ಹೇಗೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.