ಹಾಸನ:ಅಪ್ಪ-ಮಕ್ಕಳಿಂದಲೇ ಬಿಜೆಪಿಯವರು ಅಧಿಕಾರವನ್ನು ಹಿಡಿದಿದ್ದು ಅನ್ನೋದನ್ನು ಮರೆತುಬಿಟ್ರಾ? ದೇವೇಗೌಡ್ರ ಬಗ್ಗೆ ಮಾತನಾಡಬೇಕಾದ್ರೆ ಯೋಚಿಸಿ ಮಾತನಾಡಬೇಕು ಎಂದು ಮಾಜಿ ಸಚಿವ ರೇವಣ್ಣ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೆ ತಿರುಗೇಟು ನೀಡಿದ್ದಾರೆ.
ಅಪ್ಪ, ಮಕ್ಕಳ ಅಧಿಕಾರಕ್ಕೆ ಬ್ರೇಕ್ ಹಾಕಿ ಮತ್ತು ರಾಜ್ಯಕ್ಕೆ ಬರ ಬಂದ್ರು ಗೌಡರ ಕಣ್ಣೀರು ಮಾತ್ರ ಬತ್ತೋದಿಲ್ಲ ಎಂಬ ನಳೀನ್ ಕುಮಾರ್ ಕಟೀಲ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಈ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ ಅಂದ್ರೆ ಅದು ಅಪ್ಪ-ಮಕ್ಕಳ ಪಕ್ಷದಿಂದಲೇ. ನಮ್ಮ ಪಕ್ಷವನ್ನು ತಗಿಯಲಿಕ್ಕೆ ಹೊರಟಿದ್ದಾರೆ, ಅವರಿಗೆ ಒಳ್ಳೆಯಾದಾಗಲಿ. ನಮ್ಮನ್ನು ಬೇಕಾದ್ರೆ ಬೈಯ್ಯಲಿ, ದೇವೇಗೌಡರನ್ನು ಬೈಯ್ಯುವುದಕ್ಕೆ ಯಾವ ನೈತಿಕತೆ ಇದೆ ಎಂದು ವಾಗ್ದಾಳಿ ನಡೆಸಿದರು.