ಕರ್ನಾಟಕ

karnataka

By

Published : Jan 6, 2020, 7:09 AM IST

ETV Bharat / state

ಕುಮಾರಸ್ವಾಮಿ ಸರ್ಕಾರ ರಣಘಟ್ಟ ಯೋಜನೆಗೆ ಬಿಡುಗಡೆ ಮಾಡಿದ್ದ 100ಕೊಟಿ ರೂಪಾಯಿಗೆ ಆಗ್ರಹ

ಪುಷ್ಪಗಿರಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಗಣ್ಯರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯೋಜನೆಗಳು ಹಾಗೂ ಪುಷ್ಪಗಿರಿ ಸ್ವಾಮೀಜಿಯವರ ಸಾಮಾಜಿಕ ಕಳಕಳಿಯನ್ನು ಕೊಂಡಾಡಿದರು.

Pushpagiri uthsav in Hassan Mutt
ಕುಮಾರಸ್ವಾಮಿ ಸರ್ಕಾರ ರಣಘಟ್ಟ ಯೋಜನೆಗೆ ಬಿಡುಗಡೆ ಮಾಡಿದ್ದ 100ಕೊಟಿ ರೂಪಾಯಿಗೆ ಆಗ್ರಹ

ಹಾಸನ:ಜಿಲ್ಲೆಯಲ್ಲಿ ನಡೆದ ಪುಷ್ಪಗಿರಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಗಣ್ಯರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯೋಜನೆಗಳು ಹಾಗೂ ಪುಷ್ಪಗಿರಿ ಸ್ವಾಮೀಜಿಯವರ ಸಾಮಾಜಿಕ ಕಳಕಳಿಯನ್ನು ಕೊಂಡಾಡಿದರು.

ಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡ ಬಳಿಕ ರಣಘಟ್ಟ ಯೋಜನೆಗೆ ನೂರು ಕೋಟಿ ಬಿಡುಗಡೆ ಮಾಡಿ ನೀರಾವರಿ ಸಮಸ್ಯೆಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಕುಮಾರಸ್ವಾಮಿ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನನವನ್ನ ಬಳಸಿ ಯೋಜನೆಗೆ ಚಾಲನೆ ನೀಡಬೇಕು ಎಂದು ಶಾಸಕ ಕೆ.ಎಸ್ ಲಿಂಗೇಶ್ ಮನವಿ ಮಾಡಿದರು. ಜೊತೆಗೆ ತಾಲೂಕಿಗೆ 670 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ ಮುಖ್ಯಮಂತ್ರಿ ಎಂದರೆ ಅದು ಕುಮಾರಸ್ವಾಮಿ ಮಾತ್ರ ಅಂತ ಕೊಂಡಾಡಿದರು.

ಪುಷ್ಪಗಿರಿಯ ಸ್ವಾಮೀಜಿ ಚಿಕ್ಕವಯಸ್ಸಿನಲ್ಲಿಯೇ ಬಡವರ ಜವಾಬ್ದಾರಿ ತೆಗೆದುಕೊಂಡು ಅವರೆಲ್ಲ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕವಾಗಿ ನೆಲೆ ಕಂಡುಕೊಳ್ಳುವಂತೆ ಮಾಡುವುದರಲ್ಲಿ ಸಫಲತೆ ಕಂಡಿದ್ದಾರೆ. ಕೆರೆ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಭಕ್ತರು ಕೊಟ್ಟಂತಹ ಆರ್ಥಿಕ ಸಹಾಯವನ್ನು ರೈತರಿಗೆ ಅರ್ಪಣೆ ಮಾಡುತ್ತಿರುವ ಏಕೈಕ ಸ್ವಾಮೀಜಿ ಎಂದರೆ ಅದು ಪುಷ್ಪಗಿರಿ ಸ್ವಾಮೀಜಿ ಎಂದರು.

ದೇಹದ ಕೊಳೆ ತೆಗೆಯೋದಕ್ಕೆ ಸ್ನಾನ ಮಾಡುತ್ತೇವೆ ಮನಸ್ಸಿನ ಕೊಳೆ ತೆಗೆಯಲು ಸತ್ಸಂಗ ಅಗತ್ಯವಾಗಿ ಬೇಕಾಗುತ್ತದೆ. ಆಧ್ಯಾತ್ಮಿಕ ಜೀವನ ಒಂದು ಸಾಹಸ ಯಾತ್ರೆ. ಅಂತಹ ಆಧ್ಯಾತ್ಮಿಕ ಜೀವನವನ್ನು ಕಾಪಾಡಿಕೊಂಡು ಪುಷ್ಪಗಿರಿ ಮಠವನ್ನು ಅಭಿವೃದ್ಧಿಪಡಿಸಿದ ಮಠಾಧೀಶರಲ್ಲಿ ಸೋಮಶೇಖರ ಸ್ವಾಮೀಜಿ ಒಬ್ಬರು ಎಂದು ಎ.ಟಿ. ರಾಮಸ್ವಾಮಿ ಮೆಚ್ಚುಗೆ ಮಾತುಗಳನ್ನಾಡಿದರು.

ಮಠಾಧೀಶರು ಮನಸ್ಸು ಮಾಡಿದರೆ ರಾಜ್ಯದಲ್ಲಿ ಪರಮ ನ್ಯಾಯ ಪ್ರಾಮಾಣಿಕತೆ ಉಳಿಯುವುದರಲ್ಲಿ ಎರಡು ಮಾತಿಲ್ಲ. ನಾವು ಕೃಷಿಯನ್ನೂ ಮಾಡಿಕೊಂಡು ರಾಜಕೀಯದಲ್ಲಿರುವವರು. ಹಾಗಾಗಿ ಶ್ರೀಮಠ ಲೋಕಾರ್ಪಣೆ ಮಾಡಿರುವ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಯೋಜನೆಗೆ ನನ್ನ ಎರಡು ತಿಂಗಳ ಸಂಬಳವನ್ನು ನೀಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು


ಹಿಂದೆ ಮಠಾಧೀಶರು ಅಧ್ಯಾತ್ಮಗಳಲ್ಲಿ ಹೆಚ್ಚು ಭಾಗಿಯಾಗುತ್ತಿದ್ದರು. ಆದರೆ, ಈಗಿನ ಮಠಾಧೀಶರು ಜನರ ಮಧ್ಯೆ ಇದ್ದು ಜನರ ಸಮಸ್ಯೆಗಳಿಗೆ ಭಾಗಿಯಾಗುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಕೆ. ಕುಮಾರಸ್ವಾಮಿ ಹೇಳಿದರು.

ಯಗಚಿ ನೀರನ್ನು ಬೇರೆಡೆಗೆ ತೆಗೆದುಕೊಂಡು ಹೋಗುವುದಿಲ್ಲ ಅದನ್ನ ಮಾದಿಹಳ್ಳಿ ಹಾಗೂ ಹಳೇಬೀಡು ಭಾಗಗಳಿಗೂ ನೀಡಬೇಕು ಎಂದು ಹಿಂದೆಯೇ ಹೋರಾಟ ಮಾಡಿದ್ದೆವು. ರಣಘಟ್ಟದ ಬಗ್ಗೆ ಯಾವ ಸರ್ಕಾರ ಕೂಡ ಇದುವರೆಗೆ ಸ್ಪಂದಿಸಿರಲಿಲ್ಲ. ಆದರೆ, ಕುಮಾರಸ್ವಾಮಿ ಅದಕ್ಕೆ ಜೀವತುಂಬಿ ತಮ್ಮ ಬಜೆಟ್ಟಿನಲ್ಲಿ ನೂರು ಕೋಟಿಯನ್ನು ಬಿಡುಗಡೆ ಮಾಡಿದ್ದು ತುಂಬಾ ಶ್ಲಾಘನೀಯ. ಆದರೆ, ಅನುದಾನ ಈಗ ಸ್ಥಗಿತಗೊಂಡಿದ್ದು, ಅದನ್ನು ಮುಂದುವರಿಸುವ ಮೂಲಕ ಕನಿಷ್ಠ 50 ಕೋಟಿಯನ್ನು ಬಿಡುಗಡೆ ಮಾಡಿ ಕಾಮಗಾರಿ ಪ್ರಾರಂಭಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ರಾಜ್ಯದ ರೈತರ ಸಾಲ ಮನ್ನಾ ಮಾಡಿದ ಮುಖ್ಯಮಂತ್ರಿಗಳಲ್ಲಿ ಕುಮಾರಸ್ವಾಮಿ ಹೆಚ್ಚಿನ ಪಾತ್ರ ವಹಿಸಿದ್ದು, ಸುಮಾರು 48 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಮೂಲಕ ರೈತರ ಸಂಕಷ್ಟಗಳಿಗೆ ಸ್ಪಂದಿಸಿರುವ ಏಕೈಕ ಮುಖ್ಯಮಂತ್ರಿ ಎಂದರು.

ABOUT THE AUTHOR

...view details