ಕರ್ನಾಟಕ

karnataka

ETV Bharat / state

ಸಮ-ಬೆಸ ನಿಯಮ.. ಅಗತ್ಯವಸ್ತುಗಳ ಖರೀದಿಗೆ ಮುಗಿಬಿದ್ದ ಜನತೆ..

ಪಟ್ಟಣದಲ್ಲಿ ಮಂಗಳವಾರ ಬೆಳಗ್ಗೆ 9 ರಿಂದ 12 ಗಂಟೆಯವರೆಗೆ ಲಾಕ್​ಡೌನ್ ಸಡಿಲಗೊಳ್ಳಿಸಿದ್ದರಿಂದ ಪಟ್ಟಣ ಸಹಜ ಸ್ಥಿತಿಗೆ ಹಿಂತಿರುಗಿತ್ತು. ಬಹುತೇಕ ದಿನಸಿ ಅಂಗಡಿಗಳಲ್ಲಿ ಅಗತ್ಯ ವಸ್ತುಗಳು ಮತ್ತು ತರಕಾರಿ ಬೆಲೆ ಸಹ ಏರಿಕೆ ಕಂಡಿತ್ತು.

By

Published : Mar 31, 2020, 7:43 PM IST

public purchase essential items
ಅಗತ್ಯವಸ್ತುಗಳನ್ನು ಕೊಳ್ಳಲು ಮುಗಿಬಿದ್ದ ಜನತೆ

ಸಕಲೇಶಪುರ :ಲಾಕ್​ಡೌನ್‌ ಸಡಿಲಗೊಳಿಸಿ ಸಮ-ಬೆಸ ನಿಯಮದಂತೆ ಮಂಗಳವಾರ ಅಗತ್ಯ ವಸ್ತುಗಳನ್ನು ಕೊಳ್ಳಲು ಬಿಡುವು ನೀಡಲಾಗಿತ್ತು. ಹಾಗಾಗಿ ಜನ ಮುಗಿಬಿದ್ದು ವಸ್ತುಗಳನ್ನು ಖರೀದಿಸಿದರು.

ಅಗತ್ಯವಸ್ತುಗಳ ಖರೀದಿಗೆ ಮುಗಿಬಿದ್ದ ಜನ..

ಪಟ್ಟಣದಲ್ಲಿ ಮಂಗಳವಾರ ಬೆಳಗ್ಗೆ 9 ರಿಂದ 12 ಗಂಟೆಯವರೆಗೆ ಲಾಕ್​ಡೌನ್ ಸಡಿಲಗೊಳ್ಳಿಸಿದ್ದರಿಂದ ಪಟ್ಟಣ ಸಹಜ ಸ್ಥಿತಿಗೆ ಹಿಂತಿರುಗಿತ್ತು. ಬಹುತೇಕ ದಿನಸಿ ಅಂಗಡಿಗಳಲ್ಲಿ ಅಗತ್ಯ ವಸ್ತುಗಳು ಮತ್ತು ತರಕಾರಿ ಬೆಲೆ ಸಹ ಏರಿಕೆ ಕಂಡಿತ್ತು.

ಎರಡು ತರಹದ ಹಣ್ಣುಗಳನ್ನು ಬಿಟ್ಟರೇ ಪಟ್ಟಣ ವ್ಯಾಪ್ತಿಯಲ್ಲಿ ಹಣ್ಣುಗಳ ಮಾರಾಟ ಹೆಚ್ಚಿರಲಿಲ್ಲ. ಮಧ್ಯಾಹ್ನ 12 ಗಂಟೆ ಹೊತ್ತಿಗೆ ಅಂಗಡಿಗಳ ಸಮಯ ಮುಗಿದಿದ್ದರಿಂದ ಪೊಲೀಸರು ಅಂಗಡಿಗಳ ಬಾಗಿಲನ್ನು ಹಾಕಿಸಿದರು. 12 ಗಂಟೆ ನಂತರ ಪಟ್ಟಣ ಸಂಪೂರ್ಣವಾಗಿ ಲಾಕ್‌ಡೌನ್ ಆಗಿತ್ತು.

ABOUT THE AUTHOR

...view details