ಕರ್ನಾಟಕ

karnataka

By

Published : Sep 25, 2020, 5:45 PM IST

ETV Bharat / state

ಕರ್ನಾಟಕ ಬಂದ್‌ನ ಶಕ್ತಿಯುತವಾಗಿ ಯಶಸ್ವಿಗೊಳಿಸಲಾಗುವುದು.. ಕೊಟ್ಟೂರು ಶ್ರೀನಿವಾಸ್

ರೈತರ ಬದುಕು ಹಾಳಾದರೆ ಎಲ್ಲರಿಗೂ ತೊಂದರೆ ಉಂಟಾಗುತ್ತದೆ. ಆಹಾರದ ಭದ್ರತೆ ಇಲ್ಲವಾದ್ರೇ ಮುಂದಿನ ದಿನಗಳಲ್ಲಿ ಇಡೀ ದೇಶವೇ ತೊಂದರೆ ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಭೂ ಸುಧಾರಣಾ ಕಾಯ್ದೆಯನ್ನು ಕೂಡಲೇ ಕೈಬಿಡಬೇಕು..

Monday will be a successful Karnataka Band: Kottur Srinivas
ಕರ್ನಾಟಕ ಬಂದ್‌ನ್ನು ಶಕ್ತಿಯುತವಾಗಿ ಯಶಸ್ವಿಗೊಳಿಸಲಾಗುವುದು: ಕೊಟ್ಟೂರು ಶ್ರೀನಿವಾಸ್

ಹಾಸನ :ವಿವಿಧ ಸಂಘಟನೆಗಳು ಸೇರಿ ಸೋಮವಾರ ಕರೆ ನೀಡಲಾಗಿರುವ ಕರ್ನಾಟಕ ಬಂದ್‌ನ ಶಕ್ತಿಯುತವಾಗಿ ಯಶಸ್ವಿಗೊಳಿಸಲಾಗುವುದು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೊಟ್ಟೂರು ಶ್ರೀನಿವಾಸ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ತಕರು, ಹೋಟೆಲ್ ಉದ್ಯಮಿಗಳು, ಆಟೋರಿಕ್ಷಾ ಚಾಲಕರು, ಟೆಂಪೋ ಚಾಲಕರು ಹಾಗೂ ವಿವಿಧ ಸಂಘಟನೆಗಳು ಕರ್ನಾಟಕ ಬಂದ್​ಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಬಂದ್​ಗೆ ಬರುವಂತೆ ಯಾರನ್ನೂ ಒತ್ತಾಯ ಮಾಡಲ್ಲ. ಸ್ವಯಂಪ್ರೇರಿತ ಬಂದ್​ಗೆ ಬೆಂಬಲ ಕೊಡುವಂತೆ ಕೋರಿದರು.

ಕರ್ನಾಟಕ ಬಂದ್‌ ಶಕ್ತಿಯುತವಾಗಿ ಯಶಸ್ವಿಗೊಳಿಸಲಾಗುವುದು .. ಕೊಟ್ಟೂರು ಶ್ರೀನಿವಾಸ್

ರೈತರ ಬದುಕು ಹಾಳಾದರೆ ಎಲ್ಲರಿಗೂ ತೊಂದರೆ ಉಂಟಾಗುತ್ತದೆ. ಆಹಾರದ ಭದ್ರತೆ ಇಲ್ಲವಾದ್ರೇ ಮುಂದಿನ ದಿನಗಳಲ್ಲಿ ಇಡೀ ದೇಶವೇ ತೊಂದರೆ ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಭೂ ಸುಧಾರಣಾ ಕಾಯ್ದೆಯನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.

ABOUT THE AUTHOR

...view details