ಕರ್ನಾಟಕ

karnataka

ETV Bharat / state

ಮೂರನೇ ಅಲೆ ಬರುವುದಕ್ಕೆ ಮುನ್ನ ಮಕ್ಕಳಿಗೆ ಲಸಿಕೆ ಕೊಡಿ : ಶಾಸಕ ಶಿವಲಿಂಗೇಗೌಡ ಮನವಿ - ಮಕ್ಕಳಿಗೆ ಹೋಂ ಐಸೋಲೇಶನ್

ಅಂಗನವಾಡಿ ಕಾರ್ಯಕರ್ತರು ತುಂಬಾ ಚೆನ್ನಾಗಿ ಕೆಲಸ ಮಾಡ್ತಿದ್ದಾರೆ. ಅವರು ಇರುವುದರಿಂದಲೇ ಇವತ್ತು ಕೊರೊನಾ ಕಂಟ್ರೋಲ್​ಗೆ ಬರುತ್ತಿದೆ. ಜಿಲ್ಲೆಯಲ್ಲಿ ಇಂದು ಸಾವಿಗೀಡಾಗಿರುವವರು ನಾನಾ ಕಾಯಿಲೆಗಳಿಗೆ ಒಳಗಾಗಿ ಬಳಿಕ ಕೋವಿಡ್​ನಿಂದ ಸಾವಿಗೀಡಾಗಿದ್ದಾರೆ. ಇಂದಿನಿಂದಲೇ ಬಲಹೀನತೆ ಇರುವ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಕೆಲಸವಾಗಬೇಕು..

shivlingegowda
shivlingegowda

By

Published : Jun 19, 2021, 5:49 PM IST

Updated : Jun 19, 2021, 10:54 PM IST

ಹಾಸನ :ಎರಡನೇ ಅಲೆಯಲ್ಲಿ ಹೋಂ ಐಸೋಲೇಷನ್ ಮಾಡದೇ ಸೋಂಕು ಹರಡಿಸಿ ಬಿಟ್ರಿ. ಆದ್ರೆ, ಮೂರನೇ ಅಲೆಯಲ್ಲಿ ಆ ರೀತಿ ಮಾಡಿ ಮಕ್ಕಳ ಜೀವ ತೆಗೆಯುವುದು ಬೇಡ. ಬದಲಿಗೆ ಕಡ್ಡಾಯವಾಗಿ ಕಾನೂನಾನ್ಮಕವಾಗಿ ಮಕ್ಕಳನ್ನು ಮುಂದಿನ ದಿನದಲ್ಲಿ ಹೋಂ ಐಸೋಲೇಷನ್ ಮಾಡುವಂತೆ ಆದೇಶ ಹೊರಡಿಸಿ ಎಂದು ಸರ್ಕಾರಕ್ಕೆ ಶಾಸಕ ಶಿವಲಿಂಗೇಗೌಡ ಒತ್ತಾಯಿಸಿದ್ರು.

ಹಾಸನ ಜಿಲ್ಲಾ ಪಂಚಾಯತ್‌ನಲ್ಲಿ ನಡೆದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತ್ತಾ, ಈಗಾಗಲೇ ಮುಂದೆ 3ನೇ ಅಲೆ ಬರುತ್ತದೆಂದು ಹೇಳಲಾಗುತ್ತಿದೆ. ಅದಕ್ಕೆ ಈಗಿಂದಲೇ ಸಿದ್ಧತೆ ಮಾಡಿಕೊಳ್ಳಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆಗೆ ಮನವಿ ಮಾಡಿದ್ರು.

ಶಾಸಕ ಶಿವಲಿಂಗೇಗೌಡ

ಜಿಲ್ಲೆಯಲ್ಲಿ 2ನೇ ಅಲೆಯಲ್ಲಿ ಮಧ್ಯಮ ವರ್ಗದವರು ಇದ್ದ ಆಸ್ತಿ-ಪಾಸ್ತಿ ಮಾರಿ ಆರ್ಥಿಕ ದುಸ್ಥಿತಿಗೆ ತಲುಪಿದ್ದಾರೆ. ಅಂತಹ ಪರಿಸ್ಥಿತಿ 3ನೇ ಅಲೆಯಲ್ಲಿ ಬರುವುದು ಬೇಡ. ಮಕ್ಕಳಿಗೆ ಹೋಂ ಐಸೋಲೇಷನ್ ಮಾಡುವುದಾದರೇ ಅವರ ಜೊತೆ ಪೋಷಕರೊಬ್ಬರು ಇರಬೇಕು.

ಒಂದು ಮಗುವನ್ನು ದಾಖಲು ಮಾಡಿದ್ರೆ ಅವರ ಆರೈಕೆ ಮಾಡುವುದು ತುಂಬಾ ಕಷ್ಟ. ಸೋಂಕು ಹರಡಿಸಿ ಮಕ್ಕಳನ್ನು ಸಾಯಿಸುವ ಕೆಲಸ ಆಗಬಾರದು. ಕೋವಿಡ್​ನಿಂದ ಸಾವಿಗೀಡಾದ ಕುಟುಂಬದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು ಎಂದರು.

ಇನ್ನು, ಅಂಗನವಾಡಿ ಕಾರ್ಯಕರ್ತರು ತುಂಬಾ ಚೆನ್ನಾಗಿ ಕೆಲಸ ಮಾಡ್ತಿದ್ದಾರೆ. ಅವರು ಇರುವುದರಿಂದಲೇ ಇವತ್ತು ಕೊರೊನಾ ಕಂಟ್ರೋಲ್​ಗೆ ಬರುತ್ತಿದೆ. ಜಿಲ್ಲೆಯಲ್ಲಿ ಇಂದು ಸಾವಿಗೀಡಾಗಿರುವವರು ನಾನಾ ಕಾಯಿಲೆಗಳಿಗೆ ಒಳಗಾಗಿ ಬಳಿಕ ಕೋವಿಡ್​ನಿಂದ ಸಾವಿಗೀಡಾಗಿದ್ದಾರೆ.

ಇಂದಿನಿಂದಲೇ ಬಲಹೀನತೆ ಇರುವ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಕೆಲಸವಾಗಬೇಕು. ಹಾಗಾದರೆ, ಮಾತ್ರ ಮಕ್ಕಳ ದೇಹದೊಳಗೆ ಸೋಂಕು ನುಸುಳಲು ಸಾಧ್ಯವಾಗುವುದಿಲ್ಲ. ಹಾಗಾಗಿ, ತಜ್ಞರ ಅಭಿಪ್ರಾಯ ಪಡೆದು ಸರ್ಕಾರ ಮುಂಜಾಗ್ರತೆ ಕೈಗೊಳ್ಳಬೇಕು ಎಂದ್ರು.

Last Updated : Jun 19, 2021, 10:54 PM IST

ABOUT THE AUTHOR

...view details