ಕರ್ನಾಟಕ

karnataka

ETV Bharat / state

ಹಾಸನ ವಿಮಾನ ನಿಲ್ದಾಣಕ್ಕೆ ಇಂದಿನ ಬಜೆಟ್​ನಲ್ಲಿ ಬಂಪರ್ ಕೊಡುಗೆ ಸಿಗಲಿದೆ: ಪ್ರೀತಂ ಜೆ ಗೌಡ

ಹಾಸನ ವಿಮಾನ ನಿಲ್ದಾಣದ ಕಾಮಗಾರಿಗೆ ಈ ಬಾರಿ ಬಜೆಟ್​ನಲ್ಲಿ ಹಣ ಬಿಡುಗಡೆಯಾಗಲಿದೆ ಎಂದು ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ.ಜೆ ಗೌಡ ಅಭಿಪ್ರಾಯಪಟ್ಟರು.

By

Published : Mar 8, 2021, 11:44 AM IST

Updated : Mar 8, 2021, 12:27 PM IST

MLA preetham  J gowda
ಬಿಜೆಪಿ ಶಾಸಕ ಪ್ರೀತಂ.ಜೆ ಗೌಡ

ಹಾಸನ:ಎರಡು ದಶಕಗಳ ಕನಸಿನ ಯೋಜನೆಯಾದಂತಹ ಹಾಸನ ವಿಮಾನ ನಿಲ್ದಾಣದ ಕಾಮಗಾರಿಗೆ ಈ ಬಾರಿ ಬಜೆಟ್​ನಲ್ಲಿ ಹಣ ಬಿಡುಗಡೆಯಾಗಲಿದೆ ಎಂದು ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ.ಜೆ ಗೌಡ ಅಭಿಪ್ರಾಯಪಟ್ಟರು.

ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ.ಜೆ ಗೌಡ

ನಗರದ ಮಹಾರಾಜ ಪಾರ್ಕ್ ಬಳಿ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, "ಈಗಾಗಲೇ ವಿಮಾನ ನಿಲ್ದಾಣ ಕಾಮಗಾರಿಗೆ ಇದ್ದಂತಹ ಅಡಚಣೆಗಳನ್ನು ನಿವಾರಣೆ ಮಾಡುವಂತಹ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಹಾಸನ ಜಿಲ್ಲೆಯ ಜನತೆಯ ಮೇಲೆ ಮುಖ್ಯಮಂತ್ರಿಗಳಿಗೆ ಅಪಾರವಾದ ಪ್ರೀತಿ ಇದೆ. ಹಾಗಾಗಿ ಬಹುದಿನಗಳ ಕನಸಾಗಿರುವ ವಿಮಾನ ನಿಲ್ದಾಣಕ್ಕೆ ಅನುದಾನ ನೀಡುವ ಭರವಸೆ ಇದೆ ಎಂದರು.

ವಿಮಾನ ನಿಲ್ದಾಣವಾದರೆ ಈ ಭಾಗದಲ್ಲಿ ಬೆಳೆಯುವಂತಹ ಕೃಷಿ ಉತ್ಪನ್ನಗಳನ್ನು ರಫ್ತು ಮಾಡಲು ನಾಗರಿಕ ಸೇವೆ ಸೇರಿದಂತೆ ಉದ್ಯೋಗ ಸೃಷ್ಟಿ ಕೂಡ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಯಡಿಯೂರಪ್ಪ ಹಾಸನಕ್ಕೆ ಬಂಪರ್ ಕೊಡುಗೆ ನೀಡಲಿದ್ದಾರೆ ಎಂದರು.

Last Updated : Mar 8, 2021, 12:27 PM IST

ABOUT THE AUTHOR

...view details