ಕರ್ನಾಟಕ

karnataka

ETV Bharat / state

ಸಂತೆಮರೂರು ಗ್ರಾಮದಲ್ಲಿ ಚಿರತೆ ದಾಳಿ: ಮೇಯಲು ಕಟ್ಟಿದ್ದ ಆಡು ಸಾವು - ಸಂತೆಮರೂರು ಗ್ರಾಮದಲ್ಲಿ ಚಿರತೆ ದಾಳಿ

ಸಂತೆಮರೂರು ಗ್ರಾಮದಲ್ಲಿ ಜಮೀನಲ್ಲಿ ಮೇಯಲು ಕಟ್ಟಿದ್ದ ಆಡಿನ ಮೇಲೆ ಚಿರತೆ ದಾಳಿ ನಡೆಸಿದ್ದು, ಸುಮಾರು 10 ಸಾವಿರ ರೂ. ಬೆಲೆ ಬಾಳು ಆಡು ಚಿರತೆ ದಾಳಿಯಿಂದ ಸಾವಿಗೀಡಾಗಿದೆ.

Leopard attack: Goat death in Santhemaroor
ಚಿರತೆ ದಾಳಿ: ಮೇಯಲು ಕಟ್ಟಿದ್ದ ಆಡು ಸಾವು

By

Published : Apr 22, 2020, 9:59 PM IST

ಅರಕಲಗೂಡು: ತಾಲೂಕಿನ ಸಂತೆಮರೂರು ಗ್ರಾಮದಲ್ಲಿ ಜಮೀನಲ್ಲಿ ಮೇಯಲು ಕಟ್ಟಿದ್ದ ಆಡಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ.

ಚಿರತೆ ದಾಳಿ: ಮೇಯಲು ಕಟ್ಟಿದ್ದ ಆಡು ಸಾವು

ಗ್ರಾಮದ ಹರೀಶ್ ಎಂಬುವರು ಮಧ್ಯಾಹ್ನ ಜಮೀನಲ್ಲಿ ಆಡನ್ನು ಕಟ್ಟಿ ಹಾಕಿ ಊಟ ಮಾಡಲು ಮನೆಗೆ ಬಂದಿದ್ದಾರೆ. ಈ ವೇಳೆ ಪಕ್ಕದ ಪೊದೆಯೊಳಗೆ ಅವಿತಿದ್ದ ಚಿರತೆ ಆಡಿನ ಮೇಲೆರಗಿ ಸಾಯಿಸಿದೆ. ಸುಮಾರು 10 ಸಾವಿರ ರೂ. ಬೆಲೆ ಬಾಳುವ ಆಡು ಚಿರತೆ ದಾಳಿಯಿಂದ ಸಾವಿಗೀಡಾಗಿದೆ ಎನ್ನಲಾಗಿದೆ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details