ಕರ್ನಾಟಕ

karnataka

ETV Bharat / state

ಮಾಜಿ ಸಚಿವ ರೇವಣ್ಣ ವಿರುದ್ಧ ಹರಿಹಾಯ್ದ ವಕೀಲ ದೇವರಾಜೇಗೌಡ - ಎಲೆಕ್ಷನ್ ಪಿಟಿಷನ್ ಕೇಸ್

ಹೆಚ್.ಡಿ.ರೇವಣ್ಣ ಅಧಿಕಾರಾವಧಿಯಲ್ಲಿ 13 ಸಾವಿರ ಕೋಟಿ ಅವ್ಯವಹಾರ ನಡೆಸಿದ್ದು, ಚರ್ಚೆಗೆ ಬಂದರೆ ದಾಖಲಾತಿ ಬಿಡುಗಡೆಗೊಳಿಸಲು ಸಿದ್ಧನಾಗಿದ್ದೇನೆ. ಅಭಿವೃದ್ಧಿ ಹೆಸರಿನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಭ್ರಷ್ಟಾಚಾರ ಮಾಡುತ್ತಿದ್ದು, ತುಘಲಕ್ ಸಂತತಿಯಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ವಕೀಲ ದೇವರಾಜೇಗೌಡ ಆರೋಪಿಸಿದ್ದಾರೆ.

ರೇವಣ್ಣ ವಿರುದ್ಧ ಹರಿಹಾಯ್ದ ವಕೀಲ ದೇವರಾಜೇಗೌಡ

By

Published : Aug 1, 2019, 9:18 PM IST

ಹಾಸನ: ಅಭಿವೃದ್ಧಿ ಹೆಸರಿನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಭ್ರಷ್ಟಾಚಾರ ಮಾಡುತ್ತಿದ್ದು, ತುಘಲಕ್ ಸಂತತಿಯಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ವಕೀಲ ದೇವರಾಜೇಗೌಡ ಆರೋಪಿಸಿದ್ದಾರೆ.

ರೇವಣ್ಣ ವಿರುದ್ಧ ಹರಿಹಾಯ್ದ ವಕೀಲ ದೇವರಾಜೇಗೌಡ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್.ಡಿ.ರೇವಣ್ಣ ಅಧಿಕಾರಾವಧಿಯಲ್ಲಿ 13 ಸಾವಿರ ಕೋಟಿ ಅವ್ಯವಹಾರ ನಡೆಸಿದ್ದು, ಚರ್ಚೆಗೆ ಬಂದರೆ ದಾಖಲಾತಿ ಬಿಡುಗಡೆಗೊಳಿಸಲು ಸಿದ್ಧನಾಗಿದ್ದೇನೆ ಎಂದರು. ಹೊಳೆನರಸೀಪುರದ ಹೃದಯ ಭಾಗದಲ್ಲಿರುವ ಪುರಸಭೆಗೆ ಸೇರಿದ 7ರಿಂದ 7.5 ಕೋಟಿ ರೂ. ಬೆಲೆ ಬಾಳುವ 2 ನಿವೇಶಗಳನ್ನು ಹರಾಜು ಮಾಡಲು ಟೆಂಡರ್ ಕರೆಯಲಾಯಿತು. ಈ ಕುರಿತು ಆಯ್ದ ಪತ್ರಿಕೆಯಲ್ಲೂ ಜಾಹೀರಾತು ನೀಡಲಾಗಿತ್ತು. ಅದರೆ, ಅರ್ಜಿ ಸಲ್ಲಿಸಲು ಯಾರಿಗೂ ಅವಕಾಶ ಕಲ್ಪಿಸದೆ, ಸಚಿವರು ತಮಗೆ ಬೇಕಾದ ಇಬ್ಬರು ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸಿದ್ದಾರೆ. ಕೇವಲ 65 ಲಕ್ಷಕ್ಕೆ ಹರಾಜು ಪ್ರಕ್ರಿಯೆ ಮುಗಿಸಿ ಸರ್ಕಾರಕ್ಕೆ ಕೋಟಿ ಕೋಟಿ ಹಣ ವಂಚಿಸಿದ್ದಾರೆ. ಇದಕ್ಕೆ ಕೆಲ ಸರ್ಕಾರಿ ಅಧಿಕಾರಿಗಳ ಬೆಂಬಲವೂ ಇದೆ ಎಂದು ಆರೋಪಿಸಿದರು.

ಲೋಕಸಭಾ ಚುನಾವಣೆಗೆ ಸಾರ್ವಜನಿಕರ ಹಣ ದುರುಪಯೋಗ:

ಲೋಕಸಭಾ ಚುನಾವಣೆ ಸಂದರ್ಭ ನೀರಾವರಿ ಯೋಜನೆಗಳ ಅಭಿವೃದ್ಧಿ ಕೆಲಸಗಳಿಗೆ ನೂರಾರು ಕೋಟಿ ಅನುದಾನ ಬಿಡುಗಡೆ ಮಾಡಿಸಿಕೊಂಡು, ಆ ಹಣವನ್ನು ನೀರಾವರಿ ಯೋಜನೆ ಕಾಮಗಾರಿಗೆ ಬಳಸದೇ ಮಗನ ಚುನಾವಣಾ ಭವಿಷ್ಯಕ್ಕಾಗಿ ಗ್ರಾಮಗಳ ರಸ್ತೆ, ದೇವಾಲಯ ಇತ್ಯಾದಿಗಳಿಗಾಗಿ ಬಳಸಿ ಜನರನ್ನು ಓಲೈಕೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಲೋಕಸಭಾ ಚುನಾವಣೆ ಸಂದರ್ಭ ಮಾಜಿ ಸಚಿವ ರೇವಣ್ಣ ಅಕ್ರಮ ಮತ ಚಲಾವಣೆಗೆ ಪ್ರೇರೇಪಿಸಿದ್ದಾರೆ. ಈ ಕುರಿತು ಅವರ ವಿರುದ್ಧ ಎಲೆಕ್ಷನ್ ಪಿಟಿಷನ್ ಕೇಸ್ ಹೂಡಲಾಗಿದ್ದು, ಸದ್ಯದಲ್ಲೇ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಸಂದರ್ಭ ಎದುರಾಗಲಿದೆ ಎಂದರು.

ABOUT THE AUTHOR

...view details