ಕರ್ನಾಟಕ

karnataka

By

Published : Jun 5, 2020, 11:26 PM IST

ETV Bharat / state

ಮಳೆಗಾಲ ಆರಂಭ: ಹಾಸನದಲ್ಲಿ ರಾಜಕಾಲುವೆಯ ಸ್ವಚ್ಚತಾ ಕಾರ್ಯ!

ಮಳೆಗಾಲ ಆರಂಭಗೊಂಡಿರುವ ಹಿನ್ನೆಲೆ ನೀರು ಮನೆಗಳಿಗೆ ನುಗ್ಗುವುದನ್ನು ತಡೆಗಟ್ಟಿ, ಸರಾಗವಾಗಿ ಹರಿದು ಹೋಗುವಂತೆ ಮಾಡಲು ಹಾಸನ ನಗರದ ರಾಜ ಕಾಲುವೆಯನ್ನು ನಗರಸಭೆ ವತಿಯಿಂದ ಇಂದು ಸ್ವಚ್ಛಗೊಳಿಸಲಾಯಿತು.

ಸ್ವಚ್ಚತಾ ಕಾರ್ಯ
ಸ್ವಚ್ಚತಾ ಕಾರ್ಯ

ಹಾಸನ: ಮಳೆಗಾಲ ಆರಂಭಗೊಂಡಿರುವ ಹಿನ್ನೆಲೆ ನೀರು ಮನೆಗಳಿಗೆ ನುಗ್ಗುವುದನ್ನು ತಡೆಗಟ್ಟಿ, ಸರಾಗವಾಗಿ ಹರಿದು ಹೋಗುವಂತೆ ಮಾಡಲು ನಗರದ ರಾಜ ಕಾಲುವೆಯನ್ನು ನಗರಸಭೆ ವತಿಯಿಂದ ಇಂದು ಸ್ವಚ್ಛಗೊಳಿಸಲಾಯಿತು.

ಕಾಲುವೆಯಲ್ಲಿದ್ದ ಹೂಳು, ಕಸ, ಕಡ್ಡಿ, ಅಡೆ ತಡೆಗಳನ್ನು ಜೆಸಿಬಿ, ಇಟಾಚಿ ಮೂಲಕ ಮೂಲಕ ಹೊರ ಸಾಗಿಸಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಆರೋಗ್ಯ ನಿರೀಕ್ಷಕ ಆನಂದ್ ಮಾತನಾಡಿ, ಪೃಥ್ವಿ ಥಿಯೆಟರ್‌ನಿಂದ ಹೌಸಿಂಗ್ ಬೋರ್ಡ್, ಆಡುವಳ್ಳಿ, ಜ್ಞಾನಾಕ್ಷಿ ಕಲ್ಯಾಣ ಮಂಟಪ ಬಳಿಯ ರಾಜ ಕಾಲುವೆವರೆಗೂ ಸ್ವಚ್ಛತೆ ಹಾಗೂ ಹೂಳು ಎತ್ತುವ ಕೆಲಸ ಮಾಡಲಾಗುತ್ತಿದೆ.

ಹಾಸನದಲ್ಲಿ ರಾಜಕಾಲುವೆಯ ಸ್ವಚ್ಚತಾ ಕಾರ್ಯ

ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು, ಈ ಮುನ್ನ ಸರಿಯಾಗಿ ನೀರು ಹರಿಯದೆ ಮನೆಗಳಿಗೆ ನುಗ್ಗುತ್ತಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಮುನ್ನೆಚ್ಚರಿಕೆ ಕ್ರಮವಾಗಿ ನಗರಸಭೆ ವತಿಯಿಂದ ಜೆಸಿಬಿ, ಇಟಾಚಿ ಹಾಗೂ ಟಿಪ್ಪರ್ ಮೂಲಕ ಮಣ್ಣನ್ನು ತೆಗೆದು ಸಾಗಿಸಲಾಗುತ್ತಿದೆ. ಕಳೆದ 3 ವಾರದಿಂದ ನಿರಂತರವಾಗಿ ರಾಜ ಕಾಲುವೆಯನ್ನು ಸ್ವಚ್ಛ ಮಾಡಲಾಗುತ್ತಿದೆ ಎಂದರು.

ABOUT THE AUTHOR

...view details