ಕರ್ನಾಟಕ

karnataka

By

Published : Oct 5, 2019, 12:15 PM IST

ETV Bharat / state

ಸಂಚಾರ ನಿಯಮ ಉಲ್ಲಂಘನೆ ಬಿಸಿಗೆ ಎಚ್ಚೆತ್ತ ವಾಹನ ಸವಾರರು... ಸಾರಿಗೆ ಕಚೇರಿ ಮುಂದೆ ಹಾಜರ್​

ಡಿಎಲ್ ಇಲ್ಲದ ವಾಹನ ಸವಾರರಿಗೆ 1000 ದಂಡ ವಿಧಿಸಲು ಆರಂಭಿಸಿದ್ದರಿಂದ, ಪ್ರಾದೇಶಿಕ ಸಾರಿಗೆ ಕಚೇರಿಗೆ ಮೊದಲ ವಾರದಲ್ಲಿ 30 ರಿಂದ 35 ಅರ್ಜಿಗಳು ಸಲ್ಲಿಕೆಯಾಗಿದ್ದವು. ಕಳೆದ ಒಂದು ವಾರದಲ್ಲಿ 70ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.

ಸಂಚಾರಿ ನಿಯಮ ಉಲ್ಲಂಘನೆ

ಹಾಸನ :ಕೇಂದ್ರ ಸರ್ಕಾರದ ವಾಹನ ಸಂಚಾರ ನಿಯಮ ಉಲ್ಲಂಘನೆಗೆ ಭಾರಿ ಮೊತ್ತದ ದಂಡ ವಿಧಿಸಿದ ನಂತರ ವಾಹನ ಸವಾರರು ಡ್ರೈವಿಂಗ್​​ ಲೈಸೆನ್ಸ್​ ಮತ್ತು ನವೀಕರಣ ಅರ್ಜಿ ಹಾಗೂ ವಾಹನ ಎಮಿಷನ್​ ಟೆಸ್ಟ್​ ಮಾಡಿಸಲು ಮುಗಿಬಿದ್ದಿದ್ದಾರೆ.

ಡಿಎಲ್ ಇಲ್ಲದ ವಾಹನ ಸವಾರರಿಗೆ 1000 ದಂಡ ವಿಧಿಸಲು ಆರಂಭಿಸಿದ್ದರಿಂದ, ಪ್ರಾದೇಶಿಕ ಸಾರಿಗೆ ಕಚೇರಿಗೆ ಮೊದಲ ವಾರದಲ್ಲಿ 30 ರಿಂದ 35 ಅರ್ಜಿಗಳು ಸಲ್ಲಿಕೆಯಾಗಿದ್ದವು. ಕಳೆದ ಒಂದು ವಾರದಲ್ಲಿ 70ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಆಗಸ್ಟ್​​ನಲ್ಲಿ 90, ಸೆಪ್ಟೆಂಬರ್​​ನಲ್ಲಿ 140 ವಾಹನ ಚಾಲನಾ ಪರವಾನಿಗೆ ವಿತರಿಸಲಾಗಿದೆ.

ಕೇಂದ್ರ ಸರ್ಕಾರ ಅನಕ್ಷರಸ್ಥರು ಸಹ ಡಿಎಲ್ ಪಡೆಯಲು ಅರ್ಹರು ಎಂಬ ಕಾನೂನು ಜಾರಿಗೊಳಿಸಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿರುವ ಕಾರಣ ವಾಹನ ಸವಾರರು ಎಲ್​ಎಲ್​ಆರ್ ಹಾಗೂ ಡಿಎಲ್ ಪರೀಕ್ಷೆಗೆ ಹಾಜರಾಗಲು ತಿಂಗಳುಗಟ್ಟಲೆ ಕಾಯಬೇಕಾಗಿದೆ.

ಸಂಚಾರಿ ನಿಯಮ ಉಲ್ಲಂಘನೆ ಬಿಸಿಗೆ ಎಚ್ಚೆತ್ತ ವಾಹನ ಸವಾರರು

ವಾಹನ ಸವಾರರು ಗಣಕೀಕೃತ ವಾಯು ಮಾಲಿನ್ಯ ತಪಾಸಣಾ ಕೇಂದ್ರದಲ್ಲಿ ಪರೀಕ್ಷೆಮಾಡಿ ಪ್ರಮಾಣ ಪತ್ರವನ್ನು ಪಡೆದಿರಬೇಕು. ಪೊಲೀಸರು ತಪಾಸಣೆ ಮಾಡುವಾಗ ಈ ಪ್ರಮಾಣ ಪತ್ರ ನೀಡಬೇಕಾಗುತ್ತದೆ. ಇಲ್ಲವಾದರೆ ಸಾವಿರ ರೂಪಾಯಿ ದಂಡ ಪಾವತಿಸಬೇಕು. ಇದರಿಂದ ಪಾರಾಗಲು ವಾಹನ ಮಾಲೀಕರು ತಪಾಸಣೆಗೆ ಮುಂದಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 4,18,727 ಕ್ಕೂ ಹೆಚ್ಚು ವಾಹನಗಳಿವೆ. ಆದರೆ, ಎಮಿಷನ್ ಟೆಸ್ಟ್ ಮಾಡುವ ಕೇಂದ್ರಗಳು ಇರುವುದು ನಾಲ್ಕು ಮಾತ್ರ. ಹಾಸನ, ಸಕಲೇಶಪುರ ತಾಲೂಕುಗಳಲ್ಲಿ ಮಾತ್ರ ಮಾಲಿನ್ಯ ತಪಾಸಣಾ ಕೇಂದ್ರ ಕಾರ್ಯನಿರ್ವಹಿಸುತ್ತಿವೆ. ಬೇಲೂರು ಮತ್ತು ಚನ್ನರಾಯಪಟ್ಟಣದಲ್ಲಿ ಕೇಂದ್ರ ಆರಂಭಿಸಲಾಗಿತ್ತು‌. ತಿಂಗಳ ಬಳಿಕ ಬಂದ್​ ಮಾಡಲಾಗಿದೆ. ಎಮಿಷನ್ ಟೆಸ್ಟ್ ಗೆ ಹಾಸನ ಅಥವಾ ಸಕಲೇಶಪುರಕ್ಕೆ ಹೋಗಬೇಕಾಗಿದೆ‌.

ABOUT THE AUTHOR

...view details