ಅರಕಲಗೂಡು: ಇಂದು ದೇಶದ ರಕ್ಷಣೆಗಾಗಿ ಹುತಾತ್ಮರಾದ ವೀರ ಯೋಧರನ್ನು ಸ್ಮರಿಸುವ, ನಮಿಸುವ ದಿನ. ಕಾರ್ಗಿಲ್ ಯುದ್ಧದಲ್ಲಿ ಅರಕಲಗೂಡು ತಾಲೂಕಿನ ಅಗ್ರಹಾರದ ಯೋಧರೊಬ್ಬರು ವೀರಮರಣ ಹೊಂದಿದ್ದರು. ಈ ಯೋಧನ ಕುರಿತಾದ ಮಾಹಿತಿ ಇಲ್ಲಿದೆ.
ಕಾರ್ಗಿಲ್ ಯುದ್ಧದ ಆರಂಭದಲ್ಲಿ ಮೃತ ಪಟ್ಟ ಪ್ರಮುಖರಲ್ಲಿ ಅರಕಲಗೂಡು ತಾಲೂಕಿನ ಅಗ್ರಹಾರದ ವೆಂಕಟ (ರಾಜೇಂದ್ರ) ಒಬ್ಬರು. ಕಾರ್ಗಿಲ್ ಯುದ್ಧದಲ್ಲಿ ಮಡಿದ ಹಾಸನ ಜಿಲ್ಲೆಯ ಮೊದಲ ಯೋಧರು ಹೌದು. ಅಂದು ವೆಂಕಟ ಸಾವಿಗೆ ಇಡೀ ನಾಡಿನ ಜನತೆ ಕಣ್ಣೀರು ಹಾಕಿದ್ದರು. ಹಾಸನದಿಂದ ಅಗ್ರಹಾರದವರೆಗೆ ನಡೆದ ಪಾರ್ಥಿವ ಶರೀರದ ಯಾತ್ರೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿ ಸಾವಿರಾರು ಜನ ಗೌರವ ಸಲ್ಲಿಸಿದ್ದರು. ಅಂದಿನ ಶಾಸಕರಾಗಿದ್ದ ಎ.ಟಿ ರಾಮಸ್ವಾಮಿಯವರ ನೇತೃತ್ವದಲ್ಲಿ ಹುತಾತ್ಮ ಯೋಧನ ಪಾರ್ಥಿವ ಶರೀರ ಸಾಗಿ ಬಂದಾಗ ಪ್ರತೀ ಹಳ್ಳಿಯಲ್ಲೂ ಗೌರವ ಅರ್ಪಿಸಿದ್ದರು.
ವೆಂಕಟ್ ಅವರ ಕಲ್ಲಿನ ಪ್ರತಿಮೆಯನ್ನು ಕುಟುಂಬದವರು ಅಗ್ರಹಾರ ಗ್ರಾಮದ ಅವರ ಜಮೀನಿನಲ್ಲಿ ಸ್ಥಾಪಿಸಿದ್ದಾರೆ. ದೇಶ ಪ್ರೇಮ, ಧೈರ್ಯ ಸಾಹಸಕ್ಕೆ ಸ್ಫೂರ್ತಿಯಾದ ಕಾರ್ಗಿಲ್ ಹುತಾತ್ಮ ಯೋಧನನ್ನು ಹಾಸನದ ಜನ ಸ್ಮರಿಸುತ್ತಿದ್ದಾರೆ.