ಕರ್ನಾಟಕ

karnataka

ಮದ್ಯದಂಗಡಿ ಓಪನ್, ಗೊಬ್ಬರದಂಗಡಿ ಬಂದ್: ಸರ್ಕಾರದ ನಿಯಮದ ವಿರುದ್ಧ ಕಿಡಿಕಾರಿದ ರೈತ

By

Published : Jun 8, 2021, 7:52 AM IST

ಹಾಸನ ಜಿಲ್ಲೆಯಲ್ಲಿ ಲಾಕ್​​ಡೌನ್​​ ಜಾರಿಗೊಳಿಸಿ ಕೃಷಿ ಸಾಮಗ್ರಿ ಸೇರಿದಂತೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಈ ನಡುವೆ ಮದ್ಯ ಮಾರಾಟಕ್ಕೆ ಮಾತ್ರ ಅವಕಾಶ ನೀಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

Outrage against the government
ವಿಡಿಯೋ ಮೂಲಕ ಸಮಸ್ಯೆ ಹೇಳಿಕೊಂಡ ಚನ್ನರಾಯಪಟ್ಟಣದ ರೈತ ಸತ್ತೀಗೌಡ

ಹಾಸನ:ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿದೆ. ಆದರೆ ರೈತರಿಗೆ ಗೊಬ್ಬರ ಕೊಳ್ಳಲು ಅವಕಾಶವಿಲ್ಲ. ಜಿಲ್ಲಾಡಳಿತದ ಈ ನಿಯಮದ ವಿರುದ್ಧ ರೈತನೋರ್ವ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಮದ್ಯದ ಮಾರಾಟಕ್ಕೆ ಅನುಮತಿ ನೀಡಿ, ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡದಿರುವುದು ಎಷ್ಟು ಸರಿ? ರೈತರಿಗೆ ಮುಖ್ಯವಾಗಿ ಬೇಕಾಗಿರುವ ಗೊಬ್ಬರ, ಬಿತ್ತನೆ ಬೀಜದ ಅಂಗಡಿಗಳ ಬಾಗಿಲು ಮುಚ್ಚಲಾಗಿದೆ. ಆದರೆ ವೈನ್ ಶಾಪ್​ಗಳನ್ನು ರಾಜಾರೋಷವಾಗಿ ತೆರೆಯಲು ಅವಕಾಶ ನೀಡಲಾಗಿದೆ ಎಂದು ಚನ್ನರಾಯಪಟ್ಟಣದ ರೈತ ಸತ್ತೀಗೌಡ ಎಂಬುವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ವಿಡಿಯೋ ಮೂಲಕ ಸಮಸ್ಯೆ ಹೇಳಿಕೊಂಡ ಚನ್ನರಾಯಪಟ್ಟಣದ ರೈತ ಸತ್ತೀಗೌಡ

ನಿಮ್ಮದು ಅದೆಂಥ ಸರ್ಕಾರ, ನಿಮಗೆ ಮಾನ ಮರ್ಯಾದೆ ಇಲ್ವಾ? ಮುಂಗಾರು ಸಮಯದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಿ, ಕೃಷಿ ಸಾಮಗ್ರಿಗಳ ಅಂಗಡಿ ಮುಚ್ಚಿಸಿದ್ದೀರಲ್ಲ, ನಿಮಗೆ ನಾಚಿಕೆಯಾಗಬೇಕು ರೈತ ಸತ್ತೀಗೌಡ ಆಕ್ರೋಶ ಹೊರಹಾಕಿದ್ದಾರೆ.

ಓದಿ : ಕೋವಿಡ್​ ಕಾಟಕ್ಕೆ ಸಂಕಷ್ಟದಲ್ಲಿ ಮನೆಗೆಲಸದವರು

ABOUT THE AUTHOR

...view details