ಕರ್ನಾಟಕ

karnataka

By

Published : Oct 3, 2019, 11:18 AM IST

ETV Bharat / state

ಆಹಾರೋತ್ಪಾದನೆ ಹೆಚ್ಚಿಸುವ ಹೊಣೆ ರೈತರ ಮೇಲಿದೆ: ಡಾ.ಜಯರಾಮಯ್ಯ ಪ್ರತಿಪಾದನೆ

ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರೋತ್ಪಾದನೆ ಹೆಚ್ಚಿಸುವ ಮಹತ್ವದ ಹೊಣೆ ರೈತರ ಮೇಲಿದೆ ಎಂದು ಕಾರೆಕೆರೆ ಕೃಷಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಜಯರಾಮಯ್ಯ ಪ್ರತಿಪಾದಿಸಿದ್ದಾರೆ.

ರೈತ ದಸರಾ ಕಾರ್ಯಕ್ರಮ

ಹಾಸನ: ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರದ ಉತ್ಪದಾನೆ ಹೆಚ್ಚಿಸುವ ಮಹತ್ವದ ಹೊಣೆ ರೈತರ ಮೇಲಿದೆ ಎಂದು ಕಾರೆಕೆರೆ ಕೃಷಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಜಯರಾಮಯ್ಯ ತಿಳಿಸಿದರು.

ಕಾರೆಕೆರೆ ಕೃಷಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಜಯರಾಮಯ್ಯ

ಅರಕಲಗೂಡು ಪಟ್ಟಣದ ಶಿಕ್ಷಕರ ಭವನದಲ್ಲಿ ಮಂಗಳವಾರ ರೈತ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಲಭ್ಯವಿರುವ ಕೃಷಿ ಭೂಮಿಯಲ್ಲೇ ಹೆಚ್ಚಿನ ಉತ್ಪಾದನೆ ಮಾಡುವುದು ಅನಿವಾರ್ಯವಾಗಲಿದೆ. ಪ್ರಸ್ತುತ 288 ಮಿಲಿಯನ್ ಟನ್ ಆಹಾರದ ಅಗತ್ಯವಿದ್ದು, ಇದು ಸದ್ಯದಲ್ಲೇ 325 ಮಿಲಿಯನ್ ಟನ್‌ಗೆ ಏರಿಕೆಯಾಗಲಿದೆ. ರೈತರು ಕೇವಲ ಒಂದೇ ಬೆಳೆಗೆ ಅಂಟಿಕೊಳ್ಳದೇ ಬೆಳೆ ಪರಿವರ್ತನೆಗೆ ಮುಂದಾಗಬೇಕು. ದ್ವಿದಳ ಹಾಗೂ ಸಿರಿಧಾನ್ಯಗಳ ಕೃಷಿ ಕೈಗೊಳ್ಳುವುದರಿಂದ ಭೂಮಿಯ ಫಲವತ್ತತೆ ಹೆಚ್ಚಲಿದೆ ಎಂದು ಡಾ.ಜಯರಾಮಯ್ಯ ತಿಳಿಸಿದರು .

ವಿವಿಧ ಬೇಸಾಯ ಸಂಬಂಧಿ ಇಲಾಖೆಗಳ ಸಹಯೋಗದಲ್ಲಿ ಕೃಷಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ನಿಮಿತ್ತ ನಡೆದ ರೈತ ಕ್ರೀಡಾಕೂಟದಲ್ಲಿ ರೈತ ಕಬಡ್ಡಿ, ಹಗ್ಗ ಜಗ್ಗಾಟ. ಶ್ವಾನ ಪ್ರದರ್ಶನ ಕೂಡಾ ಏರ್ಪಡಿಸಲಾಗಿತ್ತು.

ಇನ್ನುಈ ಕಾರ್ಯಕ್ರಮದಲ್ಲಿ ಶಾಸಕ ಎ.ಟಿ.ರಾಮಸ್ವಾಮಿ, ತಾಲೂಕು ಪಂಚಾಯತ್​ ಅಧ್ಯಕ್ಷೆ ವೀಣಾ, ಜಿಲ್ಲಾ ಪಂಚಾಯತ್​ ಸದಸ್ಯೆ ರತ್ನಮ್ಮ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಂ.ಸಿ.ರಂಗಸ್ವಾಮಿ, ತಹಶೀಲ್ದಾರ್ ಟಿ.ಎಸ್.ಶಿವರಾಜ್, ತಾಲೂಕು ಪಂಚಾಯತ್ ಇಒ ಎನ್.ರವಿಕುಮಾರ್, ಸಹಾಯಕ ಕೃಷಿ ನಿರ್ದೇಶಕ ಕೆ.ಎಚ್.ರಮೇಶ್ ಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ABOUT THE AUTHOR

...view details