ಕರ್ನಾಟಕ

karnataka

By

Published : Oct 27, 2020, 2:01 PM IST

ETV Bharat / state

ಈಟಿವಿ ಭಾರತ್ ಇಂಪ್ಯಾಕ್ಟ್.. ಮೃತ ತಂಬಾಕು ಬೆಳೆಗಾರರ ಕುಟುಂಬದ ಕೈಸೇರಿತು ಬಾಕಿ ಹಣ

ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆ ವ್ಯಾಪ್ತಿಗೆ ಸೇರಿರುವ ಸುಮಾರು 32 ಜನ ತಂಬಾಕು ಬೆಳೆಗಾರರು ಮೃತಪಟ್ಟು ಸುಮಾರು 1 ವರ್ಷ ಕಳೆದರೂ ಪರಿಹಾರ ಹಣ ಕೈಸೇರಿರಲಿಲ್ಲ. ಈ ಕುರಿತ ಈಟಿವಿ ಭಾರತ್​​ ವರದಿ ಪ್ರಕಟವಾದ 10 ದಿನದ ಒಳಗೆ ಹಣ ಜಮಾವಣೆಯಾಗಿದೆ..

etv-bharat-impact-tobacco-growers-welfare-payments-settled
ಈಟಿವಿ ಭಾರತ್ ಇಂಪ್ಯಾಕ್ಟ್​: ಮೃತ ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಬಾಕಿ ಹಣ ಮಂಜೂರು

ಅರಕಲಗೂಡು (ಹಾಸನ):ತಂಬಾಕು ಮಂಡಳಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ 1 ವರ್ಷದಿಂದಲೂ ವಿಳಂಬವಾಗಿದ್ದ ಮರಣ ನಿಧಿಯ ಹಣವು ಮೃತರ ಕುಟುಂಬಸ್ಥರ ಕೈಸೇರಿದೆ.

ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆ ವ್ಯಾಪ್ತಿಗೆ ಸೇರಿರುವ ಸುಮಾರು 32 ಜನ ತಂಬಾಕು ಬೆಳೆಗಾರರು ಮೃತಪಟ್ಟು ಸುಮಾರು 1 ವರ್ಷ ಕಳೆದರೂ ಪರಿಹಾರ ಹಣ ಕೈಸೇರಿರಲಿಲ್ಲ. ತಂಬಾಕು ಮಂಡಳಿ ಮತ್ತು ಅಧಿಕಾರಿಗಳು ಕೋವಿಡ್ ನೆಪ ಹೇಳಿ, ಸಂಬಂಧಿಸಿದ ದಾಖಲೆಗಳನ್ನು ಕೇಂದ್ರ ಕಚೇರಿಗೆ ಕಳುಹಿಸದೆ ರೈತರ ಕ್ಷೇಮಾಭಿವೃದ್ಧಿ ನಿಧಿಯ ಹಣವನ್ನು ಮೃತರ ಕುಟುಂಬಕ್ಕೆ ಮಂಜೂರು ಮಾಡುವಲ್ಲಿ ವಿಳಂಬ ಮಾಡಿದ್ದರು.

ಈಟಿವಿ ಭಾರತಕ್ಕೆ ಧನ್ಯವಾದ ಅರ್ಪಿಸಿದ ರೈತ ಸಂಘದ ಅಧ್ಯಕ್ಷ ಸೀಬಳ್ಳಿ ಯೋಗಣ್ಣ

ಈ ಕುರಿತಂತೆ ಈಟಿವಿ ಭಾರತ, ‘ಮೃತ ತಂಬಾಕು ಬೆಳೆಗಾರರಿಗೆ ಹಣ ಪಾವತಿಸದಿದ್ದಲ್ಲಿ ಹೋರಾಟ: ಸೀಬಳ್ಳಿ ಯೋಗಣ್ಣ’ ಎಂಬ ಶೀರ್ಷಿಕೆಯಡಿ ವರದಿ ಸಹ ಪ್ರಕಟಿಸಿತ್ತು. ವರದಿ ಗಮನಿಸಿದ್ದ ಅಧಿಕಾರಿಗಳು ಮೃತ ಕುಟುಂಬಕ್ಕೆ ನೀಡಬೇಕಿದ್ದ ಬಾಕಿ ಮರಣ ನಿಧಿ ಹಣವನ್ನು 10 ದಿನಗಳ ಒಳಗೆ ಮಂಜೂರು ಮಾಡಿದೆ.

ಮೃತ ತಂಬಾಕು ಬೆಳೆಗಾರರ ಕುಟುಂಬಸ್ಥರಿಗೆ ಮಂಜೂರಾದ ಬಾಕಿ ಹಣ

ಆಕಸ್ಮಿಕವಾಗಿ ಮರಣ ಹೊಂದಿದ ಸಿಂಗಲ್ ಬ್ಯಾರಲ್ ಪರವಾನಿಗೆ ಹೊಂದಿರುವ ಬೆಳೆಗಾರರಿಗೆ 1 ಲಕ್ಷ ಮತ್ತು ಸ್ವಾಭಾವಿಕ ಮರಣ ಹೊಂದಿದವರಿಗೆ ಮಂಡಳಿಯು 50 ಸಾವಿರ ರೂ. ನೀಡಲಾಗುತ್ತದೆ. ( ಡಬಲ್ ಬ್ಯಾರಲ್ ಲೈಸೆನ್ಸ್ ಹೊಂದಿದ ಬೆಳೆಗಾರರ ಸ್ವಾಭಾವಿಕ ಮರಣಕ್ಕೆ 1 ಲಕ್ಷ ಮತ್ತು ಆಕಸ್ಮಿಕ ಮರಣಕ್ಕೆ 2 ಲಕ್ಷ )

ಮೃತ ತಂಬಾಕು ಬೆಳೆಗಾರರ ಕುಟುಂಬಸ್ಥರಿಗೆ ಮಂಜೂರಾದ ಬಾಕಿ ಹಣ

ಈ ಕುರಿತು ಮಾಹಿತಿ ಜೊತೆ ಸಂತಸ ಹಂಚಿಕೊಂಡಿರುವ ರೈತ ಸಂಘದ ಅಧ್ಯಕ್ಷ ಸೀಬಳ್ಳಿ ಯೋಗಣ್ಣ, ಈ ಕುರಿತು ನಿರಂತರ ಸುದ್ದಿ ಮಾಡಿ ಅಧಿಕಾರಿಗಳಿಗೆ ತಲುಪಿಸಿ, ಹಣ ಕೈಸಿಗುವಂತೆ ಮಾಡಿದ ಈಟಿವಿ ಸುದ್ದಿವಾಹಿನಿಗೆ ಧನ್ಯವಾದಗಳು ಎಂದಿದ್ದಾರೆ.

ಇನ್ನು, ಹೊಗೆಸೊಪ್ಪು ಬೆಳೆಗಾರರಿಗೆ ಸಂದಾಯವಾಗಬೇಕಿದ್ದ ಹಣ ಪಾವತಿಯಾಗಿದ್ದು, ಇದಕ್ಕಾಗಿ ಈಟಿವಿ ಭಾರತ್​​ಗೆ ಮೃತರ ಕುಟಂಬಸ್ಥರು ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ: ಮೃತ ತಂಬಾಕು ಬೆಳೆಗಾರರಿಗೆ ಹಣ ಪಾವತಿಸದಿದ್ದಲ್ಲಿ ಹೋರಾಟ: ಸೀಬಳ್ಳಿ ಯೋಗಣ್ಣ

ABOUT THE AUTHOR

...view details